Advertisement

ಅಣ್ಣಾ ಹಜಾರೆಯಿಂದ ಜನಜಾಗೃತಿ ಸಭೆ

07:15 AM Dec 29, 2017 | Team Udayavani |

ಹುಬ್ಬಳ್ಳಿ: ಹೋರಾಟಗಾರ ಅಣ್ಣಾ ಹಜಾರೆ ಅವರ ಜನಜಾಗೃತಿ ಸಭೆ ಇಲ್ಲಿನ ನೆಹರು ಮೈದಾನದಲ್ಲಿ ಜನವರಿ 4ರಂದು ನಡೆಯಲಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಅಣ್ಣಾ ಹಜಾರೆ ಅವರು ರೈತರ ಸಮಗ್ರ ಅಭಿವೃದಿಟಛಿ, ಜನ ಲೋಕಪಾಲ ಮಸೂದೆ ಹಾಗೂ ಲೋಕಾಯುಕ್ತರ ನೇಮಕಾತಿ ಹಾಗೂ ಚುನಾವಣಾ ನೀತಿ ಸುಧಾರಣೆಗೆ ಒತ್ತಾಯಿಸಿ ಮಾ.23ರಂದು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಇದರ ಪೂರ್ವಭಾವಿಯಾಗಿ ದೇಶದ ವಿವಿಧೆಡೆ ಜನಜಾಗೃತಿ ಸಭೆಗಳನ್ನು ಆಯೋಜಿಸಿದ್ದು, ರಾಜ್ಯದಲ್ಲಿ ಜ.4 ರಂದು ಹುಬ್ಬಳ್ಳಿ, ಜನವರಿ 5ರಂದು ಬೆಳಗಾವಿಯಲ್ಲಿ ಸಭೆಗಳು ನಡೆಯಲಿವೆ. ನಗರದ ನೆಹರು ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಅಣ್ಣಾ ಹಜಾರೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next