Advertisement

ಅಣ್ಣಾ ಹಜಾರೆಯ 7 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ 

02:48 PM Feb 05, 2019 | |

ರಾಳೇಗಣ ಸಿದ್ಧಿ:  ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಮತ್ತು ಕೇಂದ್ರ ಸಚಿವರಿಬ್ಬರು ಮಾತುಕತೆ ನಡೆಸಿದ ಬಳಿಕ 7 ದಿನಗಳಿಂದ ನಡೆಸುತ್ತಿದ್ದ   ಉಪವಾಸ ಸತ್ಯಾಗ್ರಹವನ್ನು ಮಂಗಳವಾರ ಹಿಂತೆಗೆದುಕೊಂಡಿದ್ದಾರೆ. 

Advertisement

ಮಂಗಳವಾರ ಮಧ್ಯಾಹ್ನ ಫ‌ಡ್ನವೀಸ್‌ ಮತ್ತು ಕೇಂದ್ರ ಸಚಿವರಾದ ರಾಧಾ ಮೋಹನ್‌ ಸಿಂಗ್‌, ಸುಭಾಷ್‌ ಭಾಮ್ರೆ ಅವರು ಅಣ್ಣಾ ಹಜಾರೆ ಅವರನ್ನು ಭೇಟಿಯಾಗಿ ಫ‌ಲಪ್ರದ ಮಾತುಕತೆ ನಡೆಸಿದ್ದಾರೆ. 

ಫ‌ಡ್ನವೀಸ್‌ ಮತ್ತು ಸಚಿವರೊಂದಿಗೆ ತೃಪ್ತಿಕರ ಮಾತುಕತೆಗಳು ನಡೆದ ಬಳಿಕ ನಾನು ನನ್ನ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದೇನೆ ಎಂದು ಅಣ್ಣಾ ಹಜಾರೆ ಸುದ್ದಿಗಾರರಿಗೆ ಹೇಳಿಕೆ ನೀಡಿದ್ದಾರೆ. 

ಲೋಕಪಾಲ ನೇಮಕಕ್ಕೆ ಆಗ್ರಹಿಸಿ ಜ.30ರಿಂದ ಸತ್ಯಾಗ್ರಹ ನಡೆಸುತ್ತಿದ್ದ 81 ರ ಹರೆಯದ ಅಣ್ಣಾ ಹಜಾರೆ ಅವರ ಆರೋಗ್ಯ ಹದಗೆಟ್ಟಿತ್ತು.ಅವರು  ಆರು ದಿನಗಳಲ್ಲಿ 4.25 ಕೆಜಿ ತೂಕ ಕಳೆದುಕೊಂಡಿದ್ದರು. 

 ಉಪವಾಸದಿಂದಾಗಿ ಅಸ್ವಸ್ಥರಾಗಿದ್ದ  ಅಣ್ಣಾ ಹಜಾರೆ ಅವರ ಆರೋಗ್ಯ ಸ್ಥಿತಿ ದಿನೇದಿನೆ ಹದಗೆಡುತ್ತಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next