Advertisement

ಅಂಕೋಲಾ : ಮದುವೆಯಾದ ಮೂರು ತಿಂಗಳಲ್ಲೇ ನವವಿವಾಹಿತ ನೇಣಿಗೆ ಶರಣು

06:11 PM Feb 18, 2023 | Team Udayavani |

ಅಂಕೋಲಾ : ನವ ವಿವಾಹಿತನೋರ್ವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಪಟ್ಟಣದ ಕಾರವಾರ – ಅಂಕೋಲಾ ಮುಖ್ಯ ರಸ್ತೆಯ  ಅಜ್ಜಿಕಟ್ಟಾ ಬಳಿಯ ಮನೆಯೊಂದರಲ್ಲಿ ನಡೆದಿದೆ.

Advertisement

ಮನೋಜ್ ಶಿವಾನಂದ ಶೆಟ್ಟಿ (40) ಎನ್ನುವ ವ್ಯಕ್ತಿ ಪಟ್ಟಣದಲ್ಲಿ ಮೂರು ಕಡೆ ಬಟ್ಟೆ ಅಂಗಡಿಗಳನ್ನು ನಡೆಸುತ್ತಾ ಪ್ರತಿಷ್ಠಿತ ಕುಟುಂಬವಾಗಿ ಗುರುತಿಸಿಕೊಂಡಿದ್ದ ಶಿವಾನಂದ ಶೆಟ್ಟಿ ಅವರ ಐವರು ಮಕ್ಕಳಲ್ಲಿ ಕಿರಿಯವನಾಗಿದ್ದ. ಕಳೆದ ಮೂರು ತಿಂಗಳ ಹಿಂದಷ್ಟೇ ಕುಮಟಾದ ಬಾಡದ ಯುವತಿಯೊಂದಿಗೆ ಮದುವೆಯಾಗಿದ್ದ. ಶನಿವಾರ ಹೆಂಡತಿ ಮನೆಯಿಂದ ಹೊರ ಹೋದಾಗ ಮನೆಯ ಅಡಿಗೆ ಕೋಣೆಯ ಬಾಗಿಲು ಹಾಕಿಕೊಂಡು, ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಅದಾವುದೋ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಾವಿಗೆ ಶರಣಾಗುವ ಮುನ್ನ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ ಎನ್ನಲಾಗಿದ್ದು, ಪೋಲಿಸ್ ತನಿಖೆಯಿಂದ ಹೆಚ್ಚಿನ ಮತ್ತು ನಿಖರ ಮಾಹಿತಿ  ತಿಳಿದು ಬರಬೇಕಿದೆ.

ಪಿಎಸೈ ಮಹಾಂತೇಶ್ ವಾಲ್ಮೀಕಿ ಮತ್ತು ಸಿಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next