Advertisement

ಬಡವರ ಕಣ್ಣೀರೊರೆಸುವ ಕಾರ್ಯವೇ ನಮ್ಮ ಮುಖ್ಯ ಧ್ಯೇಯ: ಹರೀಶ್‌ ಜಿ. ಅಮೀನ್‌

12:37 PM Jul 23, 2021 | Team Udayavani |

ಮುಂಬಯಿ: ಬಿಲ್ಲವರ ಅಸೋಸಿ ಯೇಶನ್‌ ಮುಂಬಯಿ ಇದರ ವತಿಯಿಂದ ಸಮಾಜದ ದಾನಿಗಳ ಸಂಪೂರ್ಣ ಸಹಕಾರದಿಂದ ಅಸೋಸಿಯೇಶನ್‌ನ 22 ಸ್ಥಳೀಯ ಕಚೇರಿಯಲ್ಲಿ  ಸಮಾಜದ ಅಸಹಾಯಕ ಕುಟುಂಬದವರಿಗೆ ಅಹಾರ ಕಿಟ್‌ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜು. 18ರಂದು ಬಿಲ್ಲವರ ಅಸೋಸಿಯೇಶನ್‌ ಕಾಂದಿವಲಿಯ ಸ್ಥಳೀಯ ಕಚೇರಿಯಲ್ಲಿ  ಸಮಾಜ ಬಾಂಧವರಿಗೆ ಆಹಾರ ಕಿಟ್‌ ವಿತರಣೆ ಜರಗಿತು.

Advertisement

ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಶನ್‌ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಮಾತನಾಡಿ, ಬಿಲ್ಲವರ ಅಸೋಸಿಯೇಶನ್‌ ಕೊರೊನಾ ಮಹಾಮಾರಿಯಿಂದ ತೊಂದರೆಗೀಡಾದ ಕುಟುಂಬದವರಿಗೆ ಆರಂಭ ದಿಂದಲೂ ವಿವಿಧ ರೂಪಗಳಲ್ಲಿ  ಸಹಕರಿಸಿದೆ. ಈ ವರೆಗೆ 900 ಮಂದಿಗೆ ಆಹಾರದ ಕಿಟ್‌ ನೀಡಿದ್ದೇವೆ. ಈ ಕಾರ್ಯಕ್ರಮಗಳಿಗೆ ಎಲ್ಲ  ದಾನಿಗಳ ಅಪಾರ ಸಹಕಾರ ದೊರಕಿದೆ. ಅಸೋಸಿಯೇಶನಿನ 89 ವರ್ಷಗಳ ಇತಿಹಾಸದಲ್ಲಿ ಜನಪರ ಸೇವೆಯಲ್ಲಿ ಲಕ್ಷಾಂತರ ಜನರಿಗೆ ದಾರಿದೀಪವಾಗಿದೆ. ಸಂದರ್ಭ ಒದಗಿದಾಗ ಅಸೋಸಿಯೇಶನಿನ ಪದಾಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ದಿ| ಜಯ ಸಿ. ಸುವರ್ಣ ಅವರು ನಮಗೆ ಸ್ಫೂರ್ತಿದಾಯಕರಾಗಿದ್ದು, ಅವರ ಮಾರ್ಗದರ್ಶನ ನಮಗೆ ಸಮಾಜ ಸೇವೆಗೆ ಉತ್ತೇಜನ ನೀಡಿದೆ. ಬಡವರ ಕಣ್ಣೀರೊರೆಸುವ ಕಾರ್ಯವೇ ನಮ್ಮ ಮುಖ್ಯ ಧ್ಯೇಯ. ನಿಮ್ಮ ಸಹಕಾರ ನಮಗೆ ಸದಾ ಸಿಗುತ್ತಿರಲಿ. ಭವಿಷ್ಯದಲ್ಲೂ ನಮ್ಮಿಂದ ಸಾಧ್ಯವಾದಷ್ಟು ಸಹಕಾರ ನೀಡಲಿದ್ದೇವೆ. ಜು. 24ರಂದು ಬಿಲ್ಲವ ಭವನದಲ್ಲಿ  ರಕ್ತದಾನ ಶಿಬಿರ ಜರಗಲಿದೆ. ಇದಕ್ಕೆ ತಾವೆಲ್ಲರೂ ಸಹಕಾರ ನೀಡಬೇಕೆಂದು ವಿನಂತಿಸಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಬಿಲ್ಲವರ ಅಸೋಸಿ ಯೇಶನಿನ ಕಾಂದಿವಲಿಯ ಸ್ಥಳೀಯ ಕಚೇರಿಯ ಪ್ರತಿನಿಧಿ ಹರೀಶ್‌ ಪೂಜಾರಿ ಮಾತನಾಡಿ, ದಿ| ಜಯ ಸಿ. ಸುವರ್ಣ ಅವರ ಮಾರ್ಗದರ್ಶನದಂತೆ ಮುನ್ನಡೆಯುವ ಯುವ ಅಧ್ಯಕ್ಷರು ನಮ್ಮ ಸಮಾಜಕ್ಕೆ ದೊರಕಿ¨ªಾರೆ. ಅವರಿಗೆ ನಾವು ಸಂಪೂರ್ಣ ಸಹಕಾರ ನೀಡಬೇಕೆಂದು ಹೇಳಿದರು.

ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಯೋಗೇಶ್‌ ಕೆ. ಹೆಜ್ಮಾಡಿ ಮಾತನಾಡಿ, ಈ ಕಾರ್ಯಕ್ರಮ ನೋಡಿ ಬಹಳ ಸಂತೋಷವಾಗಿದೆ. ಕಾರಣ ನಮ್ಮ ಸ್ಥಳೀಯ ಕಚೇರಿಯ ಆಹಾರ ಕಿಟ್‌ ವಿತರಣೆ ಕಾರ್ಯಕ್ರಮಕ್ಕೆ ನೂತನ ಅಧ್ಯಕ್ಷ ಹರೀಶ್‌ ಜಿ. ಅಮೀನ್‌, ನಮ್ಮ ಮಾರ್ಗ

ದರ್ಶಕರು ಸ್ವರ್ಗೀಯ ಜಯ ಸಿ. ಸುವರ್ಣರ ಸೊಸೆ ನಿಶಿತಾ ಎಸ್‌. ಸುವರ್ಣ ಹಾಗೂ ಪುತ್ರ ಸೂರ್ಯ ಕಾಂತ್‌ ಜಯ ಸುವರ್ಣ ಅವರನ್ನು ಸಮ್ಮಾನಿಸುವ ಭಾಗ್ಯ ಕಾಂದಿವಲಿ ಸ್ಥಳೀಯ ಕಚೇರಿಗೆ ಸಿಕ್ಕಿದೆ. ಗುರುದೇವರ ಅನುಗ್ರಹದಿಃದ ಉತ್ತಮ ಸಮಾಜಪರ ಸೇವೆ ಮಾಡುವುದಕ್ಕೆ ಸಮಾಜ ಬಾಂಧವರ ಸಹಕಾರ ದೊರಕುತ್ತಿದೆ. ಅಧ್ಯಕ್ಷರಿಗೆ ಕಾಂದಿವಲಿಯ ಸ್ಥಳೀಯ ಕಚೇರಿಯ ಸರ್ವ ಸದಸ್ಯರೆಲ್ಲರ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿದರು.

Advertisement

ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ, ಭಾರತ್‌ ಬ್ಯಾಂಕ್‌ನ ನಿರ್ದೇಶಕರಾದ ಗಂಗಾಧರ ಜೆ. ಪೂಜಾರಿ ಅವರು ನೂತನ ಅಧ್ಯಕ್ಷರಾದ ಹರೀಶ್‌ ಜಿ. ಅಮೀನ್‌ ಅವರನ್ನು ಅಭಿನಂದಿಸಿದರು. ನಿಶಿತಾ ಎಸ್‌. ಸುವರ್ಣ ಹಾಗೂ ಅವರ ಪತಿ ಸೂರ್ಯಕಾಂತ್‌ ಜಯ ಸುವರ್ಣ ಅವರನ್ನು ಸ್ಥಳೀಯ ಕಚೇರಿಯ ಜತೆ ಕಾರ್ಯದರ್ಶಿ ಸಬಿತಾ ಜಿ. ಪೂಜಾರಿ, ಕಾರ್ಯಕರ್ತರಾದ ವಾರಿಜಾ ಶೇಖರ್‌ ಕರ್ಕೇರ, ಹರೀಶ್‌ ಜಿ. ಅಮೀನ್‌ ಅಭಿನಂದಿಸಿದರು.

ಉಪಸ್ಥಿತರಿದ್ದ ಬಿಲ್ಲವರ ಅಸೋಸಿಯೇಶನ್‌ನ ಉಪಾಧ್ಯಕ್ಷ ಶಂಕರ್‌ ಡಿ. ಪೂಜಾರಿ, ಜತೆ ಕಾರ್ಯದರ್ಶಿ ಹರೀಶ್‌ ಜಿ. ಸಾಲ್ಯಾನ್‌, ಕೇಶವ ಕೆ. ಕೋಟ್ಯಾನ್‌, ಕಾಂದಿವಲಿ ಸ್ಥಳೀಯ ಕಚೇರಿಯ ಪ್ರತಿನಿಧಿ ಹರೀಶ್‌ ಪೂಜಾರಿ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್‌ ಅಂಚನ್‌, ಯುವಕ ವಿಭಾಗದ ಮಾಜಿ ಕಾರ್ಯಾಧ್ಯಕ್ಷ ನೀಲೇಶ್‌ ಪಲಿಮಾರ್‌, ಅತಿಥಿ ದೀಪಕ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಂದಿವಲಿಯ ಸ್ಥಳೀಯ ಕಚೇರಿ ಯ ಗೌರವ ಕಾರ್ಯಾಧ್ಯಕ್ಷ ಭಾಸ್ಕರ್‌ ಎಂ. ಪೂಜಾರಿ, ಕೋಶಾಧಿಕಾರಿ ರಮೇಶ ಬಂಗೇರ, ಕಾರ್ಯಕರ್ತ ರಾದ ವಿಲಾಸ್‌ ಪೂಜಾರಿ, ಶೈಲೇಶ್‌ ಪೂಜಾರಿ,

ಯಮುನಾ ಸಾಲ್ಯಾನ್‌, ಸುಜಾತಾ ಪೂಜಾರಿ. ಜಯರಾಮ್‌ ಪೂಜಾರಿ, ವಿದ್ಯಾ ಆರ್‌. ಅಮೀನ್‌, ಅನಿತಾ ಪೂಜಾರಿ ಮೊದಲಾದವರು ಸಹಕರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next