Advertisement

Kannada Cinema: ಅನೀಶ್‌ ತೇಜೇಶ್ವರ್‌ ‘ಮಾಯಾನಗರಿ’ ತೆರೆಗೆ ಸಿದ್ಧ

03:24 PM Nov 03, 2023 | Team Udayavani |

ಅನೀಶ್‌ ತೇಜೇಶ್ವರ್‌ ನಾಯಕರಾಗಿ ನಟಿಸಿರುವ “ಮಾಯಾನಗರಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಶಂಕರ್‌ ಆರಾಧ್ಯ ನಿರ್ದೇಶನದ ಈ ಚಿತ್ರ ಸೆನ್ಸಾರ್‌ನಿಂದ “ಯು/ಎ’ ಅರ್ಹತಾ ಪತ್ರ ಪಡೆದುಕೊಂಡಿದೆ. ಸಿನಿಮಾ ನಿರ್ದೇಶನದ ಕನಸು ಹೊತ್ತು ಬರುವ ಯುವ ಪ್ರತಿಭೆಯ ಪಾತ್ರದಲ್ಲಿ ಅನೀಶ್‌ ಕಾಣಿಸಿಕೊಂಡಿದ್ದಾರೆ.

Advertisement

ಕಾಮಿಡಿ, ಲವ್‌, ಆ್ಯಕ್ಷನ್‌, ಸೆಂಟಿಮೆಂಟ್‌ ಕಥಾಹಂದರವಿರುವ ಈ ಚಿತ್ರದಲ್ಲಿ ಮತ್ತೂಂದು ವಿಶೇಷತೆ ಇದೆ. ಅದನ್ನು ಟ್ರೇಲರ್‌ ಬಿಡುಗಡೆ ವೇಳೆ ಅನಾವರಣ ಮಾಡುವ ಯೋಜನೆ ನಿರ್ದೇಶಕರಿಗಿದೆ.

ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಶಂಕರ್‌ ಆರಾಧ್ಯ. ಇದರ ಜತೆಗೆ ನಿರ್ಮಾಣದ ಜವಾಬ್ದಾರಿ ಕೂಡಾ ವಹಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಶ್ವೇತಾ ಶಂಕರ್‌ ಸಹ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ವಿಕ್ರಂ ಮೋರ್‌ ಸಾಹಸ, ಮದನ್‌-ಹರಿಣಿ ಹಾಗೂ ಮುರಳಿ ನೃತ್ಯ ನಿರ್ದೇಶನ, ವಿಜಯ್‌ ಎಂ ಕುಮಾರ್‌ ಸಂಕಲನವಿದೆ.

ಅನೀಶ್‌ ಜೋಡಿಯಾಗಿ ಶ್ರಾವ್ಯಾ ರಾವ್‌ ಹಾಗೂ ತೇಜು ನಟಿಸಿದ್ದಾರೆ. ಹಿರಿಯ ನಟ ದ್ವಾರಕೀಶ್‌, ಶರತ್‌ ಲೋಹಿತಾಶ್ವ, ಅವಿನಾಶ್‌, ಸುಚೇಂದ್ರ ಪ್ರಸಾದ್‌, ಚಿಕ್ಕಣ್ಣ ಹಾಗೂ ನಿಹಾರಿಕಾ ಮೊದಲಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next