Advertisement

ಶೀರೂರು ಮಠದ ಉತ್ತರಾಧಿಕಾರಿಯಾಗಲಿರುವ ಅನಿರುದ್ಧ ಸರಳತ್ತಾಯರಿಂದ ಸಂನ್ಯಾಸ ದೀಕ್ಷೆ ಸ್ವೀಕಾರ

06:50 PM May 13, 2021 | Team Udayavani |

ಉಡುಪಿ: ಶೀರೂರು ಮಠದ ನೂತನ ಉತ್ತರಾಧಿಕಾರಿಯಾಗಿ ನಿಯೋಜನೆಗೊಳ್ಳಲಿರುವ ಅನಿರುದ್ಧ ಸರಳತ್ತಾಯರು ಸಂನ್ಯಾಸ ದೀಕ್ಷೆಯನ್ನು ಗುರುವಾರ ಶೀರೂರು ಮೂಲಮಠದಲ್ಲಿ ಸ್ವೀಕರಿಸಿದರು.

Advertisement

ಸಂನ್ಯಾಸ ದೀಕ್ಷೆ ಅಂಗವಾಗಿ ಶಾಕಲ ಹೋಮ, ವಿರಜಾ ಹೋಮ ಪ್ರೈಷೋಚ್ಚಾರಣೆ ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.

ಅನಂತರ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ನೂತನ ಯತಿಗಳಿಗೆ ಸಂನ್ಯಾಸ ಅಂಗವಾದ ಕಲಶಾಭಿಷೇಕವನ್ನು ನೆರವೇರಿಸಿ ಪ್ರಣವ ಮಂತ್ರೋಪದೇಶವನ್ನು ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next