Advertisement

ಅರಿಶಿಣ ಗಣೇಶ ಮೂರ್ತಿ ತಯಾರಿಕೆ ಆನ್‌ಲೈನ್‌ ತರಬೇತಿ

04:15 PM Sep 06, 2021 | Team Udayavani |

ದೊಡ್ಡಬಳ್ಳಾಪುರ: ಸುಚೇತನ ಎಜುಕೇಷನ್‌ ಆಂಡ್‌ ಚಾರಿಟಬಲ್‌ಟ್ರಸ್ಟ್‌ ಸಂಘದ ಮೂರನೇವಾರ್ಷಿಕೋತ್ಸವದ ಅಂಗವಾಗಿ, ಪರಿಸರಸ್ನೇಹಿ ಅರಿಶಿಣ ಗಣಪ ತಯಾರಿಕೆಕುರಿತುಆನ್‌ಲೈನ್‌ ತರಬೇತಿ ಕಾರ್ಯಗಾರನಗರದ ಜಿ.ಕೆ.ಪ್ರೌಢಶಾಲೆಯಲ್ಲಿ ನಡೆಯಿತು.

Advertisement

ಗಣೇಶಮೂರ್ತಿಗಳತಯಾರಿಕೆ ಕುರಿತು ತರಬೇತುದಾರಆನಂದ್‌ ತಿಳಿಸಿಕೊಟ್ಟರು.ರಾಸಾಯನಿಕ ಬಣ್ಣ ಪರಿಸರಕ್ಕೆ ಹಾನಿ:ಗಣೇಶಮೂರ್ತಿ ತಯಾರಿಕೆಕಾರ್ಯಗಾರ ಕುರಿತು ಮಾಹಿತಿ ನೀಡಿದಸುಚೇತನ ಎಜುಕೇಷನ್‌ ಆಂಡ್‌ಚಾರಿಟಬಲ್‌ ಟ್ರಸ್ಟ್‌ನ ಟ್ರಸ್ಟಿಮಂಜು ನಾಥ್‌ ನಾಗ್‌, ಪಿಒಪಿ, ಬಣ್ಣದಗಣೇಶ ಮೂರ್ತಿಗಳಿಂದ ಪರಿಸರಕ್ಕೆಸಾಕಷ್ಟು ಹಾನಿಯಾಗಿದೆ.

ಜಲಮೂಲಗಳು ಕಲುಷಿತಗೊಂಡುಜಲಚರ ಪ್ರಾಣಿಗಳು ಮೃತಪಟ್ಟಿವೆ. ಈನಿಟ್ಟಿನಲ್ಲಿ ಬಣ್ಣ ಬಳಸದೆಗಣೇಶಮೂರ್ತಿಗಳ ಪೂಜೆಯ ಕಡೆಗೆಹೆಚ್ಚಿನ ಒಲವು ತೋರುವುದು ಅಗತ್ಯ.100ಕ್ಕೂ ಹೆಚ್ಚು ಮಂದಿ ಭಾಗಿ:ಕೊರೊನಾ ಸೋಂಕು ನಿರೋಧಕಔಷಧೀಯ ಗುಣ ಇರುವಂತಹ ಹಾಗೂಪರಿಸರ ಸ್ನೇಹಿಯು ಆಗಿರುವ ಅರಿಶಿಣದಪುಡಿ ಮತ್ತು ಮೈದಾ ಹಿಟ್ಟು ಮಿಶ್ರಣದಮೂರ್ತಿಗಳ ತಯಾರಿಕೆಯನ್ನು ಹೆಚ್ಚುಜನಪ್ರಿಯಗೊಳ್ಳುತ್ತಿದೆ.

ಸುಮಾರು100ಕ್ಕೂ ಹೆಚ್ಚಿನ ಜನ ಕಾರ್ಯಗಾರದಲ್ಲಿಭಾಗವಹಿಸಿದ್ದರು. ಕಾರ್ಯಗಾರಮುಕ್ತಾಯದ ವೇಳೆಗೆ ಬಹುತೇಕ ಜನಅರಿಶಿಣದ ಗಣೇಶಮೂರ್ತಿಯನ್ನುಸಿದ್ಧಗೊಳಿಸಿ ಪ್ರದರ್ಶಿಸಿದ್ದು ಸಂತಸ ತಂದಿದೆಎಂದರು.

ಜಿ.ಕೆ.ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ದಿನೇಶ್‌ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಗಾರ ಸಂದರ್ಭದಲ್ಲಿಸುಚೇತನ ಎಜುಕೆಷನ್‌ ಆಂಡ್‌ಚಾರಿಟಬಲ್‌ ಟ್ರಸ್ಟ್‌ ಪದಾಧಿಕಾರಿಗಳಾದಪ್ರದೀಪ್‌,ಶ್ರೀನಿವಾಸ್‌, ಪವನ್‌ ಹಾಗೂಸ್ವಯಂ ಸೇವಕರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next