Advertisement

ಮುಂಗೋಪಿಯ ಥ್ರಿಲ್ಲರ್‌ ಸ್ಟೋರಿ “ಆ್ಯಂಗರ್‌’

04:09 PM Dec 23, 2021 | Team Udayavani |

ಸಿನಿಮಾದ ಟೈಟಲ್‌ಗಳು ಈಗ ಬೇರೆ ಬೇರೆ ಶೈಲಿಯಲ್ಲಿ ಮೂಡಿಬರುತ್ತಿದೆ. ಈಗ ಆ ಸಾಲಿನಲ್ಲಿ ಸಿಗುವ ಟೈಟಲ್‌ “ಆ್ಯಂಗರ್‌’. ಇದು ಮೈಸೂರಿನ ತಂಡ ಸೇರಿಕೊಂಡು ಮಾಡಿರುವ ಚಿತ್ರ. ಇತ್ತೀಚೆಗೆ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ನಟರಾಜ್‌ ರಂಗಾಯಣ ಈ ಚಿತ್ರದ ನಿರ್ದೇಶಕರು.

Advertisement

ರೊಮ್ಯಾಂಟಿಕ್‌ ಕ್ರೈಂ ಥ್ರಿಲ್ಲರ್‌ ಜಾನರ್‌ನಲ್ಲಿ ಈ ಸಿನಿಮಾವನ್ನು ಕಟ್ಟಿ ಕೊಡಲಾಗಿದೆಯಂತೆ. ಚಿತ್ರದ ನಾಯಕ ಬಾಲ್ಯದ ಕೆಲವು ಘಟನೆಗಳಿಂದ ತುಂಬಾ ಮುಂಗೋಪಿಯಾಗಿರುತ್ತಾನೆ. ನಾಯಕಿಯ ಪ್ರವೇಶದ ನಂತರ ಆತನ ಜೀವನದಲ್ಲಿ ಏನಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು. ಮೈಸೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಹಾಡುಗಳು ಸುಂದರವಾಗಿದೆ. ಅಷ್ಟೇ ಸುಂದರವಾಗಿ ಚಿತ್ರವೂ ಮೂಡಿಬಂದಿದೆ ಎನ್ನುವುದು ನಿರ್ದೇಶಕರ ಮಾತು

ಮನ್ವಿತ್‌ ಈ ಚಿತ್ರದ ನಾಯಕ. ಇವರಿಗಿದು ಮೊದಲ ಚಿತ್ರ. “ರಂಗಾಯಣದಲ್ಲಿ ಅಭಿನಯ ತರಬೇತಿ ಪಡೆದಿದ್ದೇನೆ. ಇದೇ ಮೊದಲ ಚಿತ್ರ. ಮುಂಗೋಪಿಯಾದರೆ ಏನೆಲ್ಲಾ ಸಂಕಷ್ಟ ಎದರಾಗುತ್ತದೆ ಎಂಬುದನ್ನು ನನ್ನ ಪಾತ್ರದ ಮೂಲಕ ನಿರ್ದೇಶಕರು ಹೇಳಿದ್ದಾರೆ’ ಎನ್ನುವುದು ಮನ್ವಿತ್‌ ಮಾತು.

ಚಿತ್ರದಲ್ಲಿ ಏಳು ಹಾಡುಗಳಿದೆ. ಅದರಲ್ಲಿ ಮೂರು ಬಿಟ್‌ ಸಾಂಗ್‌. ಶಶಾಂಕ್‌ ಶೇಷಗಿರಿ ಸೇರಿದಂತೆ ಎಲ್ಲಾ ಕನ್ನಡ ಗಾಯಕರಿಂದ ಹಾಡಿಸಿದ್ದಾರಂತೆ ಸಂಗೀತ ನಿರ್ದೇಶಕ ವಿಜಯ್‌ ಹರಿತಸ. ನಾಯಕಿ ಪುಣ್ಯಗೌಡ, ಸಾಹಸ ನಿರ್ದೇಶಕ ಮಾಸ್‌ ಮಾದ, ಗಾಯಕ ಶಶಾಂಕ್‌ ಶೇಷಗಿರಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next