Advertisement

ಆನೇಕಲ್‌:ಬಿಜೆಪಿ ಮುಖಂಡನ ಹತ್ಯೆ;ಉದ್ವಿಗ್ನ ವಾತಾವರಣ,ಪೊಲೀಸ್‌ ಭದ್ರತೆ

09:33 AM Jun 01, 2017 | |

ಆನೇಕಲ್‌ :ಇಲ್ಲಿನ ಹೀಲಲಗಿ ಗ್ರಾಮದ ರಾಮಸಾಗರ ಗೇಟ್‌ ಬಳಿ ಬಿಜೆಪಿ ಮುಖಂಡನೊಬ್ಬನನ್ನು ಬುಧವಾರ ತಡರಾತ್ರಿ ಬರ್ಬರವಾಗಿ ಹತ್ಯೆಗೈಯಲಾಗಿದ್ದು, ಘಟನೆಯ ಬಳಿಕ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

Advertisement

ಎಸ್‌ಸಿ/ಎಸ್‌ಟಿ ಮೋರ್ಚಾ ಉಪಾಧ್ಯಕ್ಷರಾಗಿದ್ದ ಹರೀಶ್‌(40) ಎನ್ನುವವರನ್ನು  ದುಷ್ಕರ್ಮಿಗಳು ಅಡ್ಡಗಟ್ಟಿ  ಕಣ್ಣಿಗೆ ಖಾರದ ಪುಡಿ ಎರಚಿ ಬರ್ಬರವಾಗಿ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. 

ಹರೀಶ್‌ ಅವರಿಗೆ ಕೆರೆಯಲ್ಲಿ  ಮೀನು ಹಿಡಿಯುವ ಟೆಂಡರ್‌ ವಿಚಾರದಲ್ಲಿ ಸ್ಥಳೀಯ ಯುವಕರಾದ ಕಿಶೋರ್‌, ರಾಜೇಶ್‌ ಮತ್ತು ಸಂದೀಪ್‌ ಎನ್ನುವವರೊಂದಿಗೆ ಜಗಳವಾಗಿತ್ತು. 

ಸೂರ್ಯನಗರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

ನೂರಾರು ಬಿಜೆಪಿ ಕಾರ್ಯಕರ್ತರು ಹರೀಶ್‌ ಮನೆ ಬಳಿ ಜಮಾಯಿಸಿದ್ದು, ಗ್ರಾಮದಲ್ಲಿ  ಬಂದ್‌ ವಾತಾವರಣ ಕಂಡು ಬಂದಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 

Advertisement

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next