Advertisement

ಆನೆಗುಡ್ಡೆ : ಶ್ರೀ ವಿನಾಯಕ ಚತುರ್ಥಿಗೆ ಸಕಲ ಸಿದ್ಧತೆ

08:30 AM Aug 24, 2017 | Team Udayavani |

ತೆಕ್ಕಟ್ಟೆ (ಆನೆಗುಡ್ಡೆ): ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶ್ರೀ ವಿನಾಯಕ ಚತುರ್ಥಿಯ ಪ್ರಯುಕ್ತ ಶ್ರೀ ಸನ್ನಿಧಿಯಲ್ಲಿ ಆ. 25ರ‌ಂದು ಅಷ್ಟೋತ್ತರ ಸಹಸ್ರ ನಾಲಿಕೇರ ಗಣಪತಿಯಾಗ ನಡೆಯಲಿದೆ.

Advertisement

ಈ ಹಿನ್ನೆಲೆಯಲ್ಲಿ ಸಂಭ್ರಮದ ಶ್ರೀ ವಿನಾಯಕ ಚತುರ್ಥಿಗಾಗಿ ದೇಗುಲವನ್ನು ಸಂಪೂರ್ಣ ಹೂವಿನಿಂದ ಅಲಂಕಾರಗೊಳ್ಳುತ್ತಿದ್ದು ಸುಮಾರು 15 ಸಾವಿರಕ್ಕೂ ಅಧಿಕ ಪಂಚಕಜ್ಜಾಯ, ಆಗಮಿಸುವ ಭಕ್ತರ ವಿತರಣೆಗಾಗಿ ಸುಮಾರು 10 ಸಾವಿರ ಲಡ್ಡು, ಸುಮಾರು 5 ಸಾವಿರ ಕಡುಬು (ಮೂಡೆ) ಹಾಗೂ ಅಪಾರ ಭಕ್ತ ಸಮೂಹವೇ ದೇಗುಲಕ್ಕೆ ಹರಿದು ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ  ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗುವುದು ಎಂದು ದೇಗುಲದ ಆನುವಂಶಿಕ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next