Advertisement

ತಿರುಪತಿಯಿಂದ ತಿರುಮಲಕ್ಕೆ ಮತ್ತೊಂದು ರಸ್ತೆ

09:12 PM Dec 13, 2021 | Team Udayavani |

ತಿರುಪತಿ: ಆಂಧ್ರ ಪ್ರದೇಶದ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿರುವ ತಿರುಮಲಕ್ಕೆ ತಿರುಪತಿಯಿಂದ ಮತ್ತೊಂದು ಘಾಟ್‌ ರಸ್ತೆಯನ್ನು ನಿರ್ಮಿಸಲು ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮಂಡಳಿ ಸಜ್ಜಾಗಿದೆ.

Advertisement

ತಿರುಮಲಕ್ಕೆ ತಿರುಪತಿಯಿಂದ ಈವರೆಗೆ ಎರಡು ರಸ್ತೆಗಳಿದ್ದವು. ಅದರಲ್ಲಿ ಒಂದು ರಸ್ತೆಯನ್ನು ತಿರುಮಲಕ್ಕೆ ತೆರಳುವುದಕ್ಕೆ ಬಳಕೆ ಮಾಡಲಾಗುತ್ತಿದ್ದರೆ ಇನ್ನೊಂದನ್ನು ತಿರುಮಲದಿಂದ ವಾಪಸು ತಿರುಪತಿಗೆ ಬರುವುದಕ್ಕೆ ಬಳಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ತಿರುಮಲಕ್ಕೆ ತೆರಳುವ ರಸ್ತೆ ಹಾಳಾಗಿದೆ. ಈಗ ಒಂದೇ ರಸ್ತೆಯಲ್ಲಿ ಸಂಚಾರ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಇವೆರೆಡು ರಸ್ತೆಗಳಲ್ಲದೆ ಮತ್ತೂಂದು ರಸ್ತೆಯನ್ನು ನಿರ್ಮಿಸಲು ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಮಂಡಳಿ ನಿರ್ಧರಿಸಿದೆ.

ಇದನ್ನೂ ಓದಿ:ಅಭ್ಯಾಸದ ವೇಳೆ ರೋಹಿತ್‌ ಶರ್ಮ ಕೈಗೆ ಏಟು : ಪಾಂಚಾಲ್‌ಗೆ ಬುಲಾವ್‌

ಹಾಗೆಯೇ ಮಳೆಯಿಂದಾಗಿ ಹಾಳಾಗಿರುವ ರಸ್ತೆಯ ದುರಸ್ಥಿಗೆ 3.95 ಕೋಟಿ ರೂ. ಮತ್ತು ಪಾದಚಾರಿಗಳ ಮಾರ್ಗವಾದ ಶ್ರೀವರಿಮೆಟ್ಟು ದುರಸ್ಥಿಗೆ 3.60 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ದೇಗುಲಕ್ಕೆ ತಿರುಪತಿಯಿಂದ ಇರುವ ಶತಮಾನಗಳ ಹಳೆದ ಟ್ರೆಕ್ಕಿಂಗ್‌ ಹಾದಿಯನ್ನೂ ಅಭಿವೃದ್ಧಿಪಡಿಸಿ ಬಳಕೆಗೆ ಯೋಗ್ಯ ಮಾಡುವುದಾಗಿ ತಿಳಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next