Advertisement

ವೈಎಸ್‌ಆರ್‌ಸಿ ಪ್ರಣಾಳಿಕೆಯನ್ನು ಪವಿತ್ರ ದಾಖಲೆ ಎಂದ ರಾಜ್ಯಪಾಲ

07:58 AM Jun 16, 2019 | mahesh |

ಅಮರಾವತಿ: ಇತ್ತೀಚೆಗೆ ನಡೆದ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ವೇಳೆ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವು ಬಿಡುಗಡೆ ಮಾಡಿದ್ದ ಚುನಾವಣಾ ಪ್ರಣಾಳಿಕೆಯ ಪ್ರತಿಗಳನ್ನು ಆಂಧ್ರ ಪ್ರದೇಶ ಸರಕಾರದ ಎಲ್ಲ ಇಲಾಖೆಗಳಿಗೂ ರವಾನಿಸಲಾಗುವುದು ಎಂದು ಆ ರಾಜ್ಯದ ರಾಜ್ಯಪಾಲ ಇಎಸ್‌ಎಲ್ ನರಸಿಂಹನ್‌ ತಿಳಿಸಿದ್ದಾರೆ.

Advertisement

ಅಮರಾವತಿಯ ವಿಧಾನಸಭೆಯಲ್ಲಿ ಶನಿವಾರ, ಜಂಟಿ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವೈಎಸ್‌ಆರ್‌ಸಿ ಪ್ರಣಾಳಿಕೆಯು ‘ಪವಿತ್ರ ದಾಖಲೆ’ಯಾಗಿದ್ದು, ಅದು ಎಲ್ಲ ಇಲಾಖೆಗಳಲ್ಲೂ ಇರಬೇಕು. ಹಾಗಾಗಿ, ಎಲ್ಲ ಇಲಾಖೆಗಳಿಗೆ ಒಂದೊಂದು ಪ್ರತಿಯನ್ನು ರವಾನಿಸಲಾಗುವುದು. ಹೀಗಾ ಗು ವುದರಿಂದ, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿ ಸುವ ಜವಾಬ್ದಾರಿಯನ್ನು ಸರಕಾರಕ್ಕೆ ನೆನಪಿಸಿದಂತಾಗುತ್ತದೆ ಎಂದರು.

ಪ್ರಣಾಳಿಕೆಯಲ್ಲಿ, ಹಿಂದಿನ ಸರಕಾರದ ಕೆಟ್ಟ ಆಡಳಿತದಿಂದಾಗಿ ಬೊಕ್ಕಸ ಬರಿದಾಗುವ ಪರಿಸ್ಥಿತಿಗೆ ತಲುಪಿದೆ. ತಾನು ಅಧಿಕಾರಕ್ಕೆ ಬಂದರೆ, ಪಾರದರ್ಶಕ ಹಾಗೂ ದಕ್ಷ ಆಡಳಿತದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹತೋಟಿಗೆ ತರುವುದಾಗಿ ವೈಎಸ್‌ಆರ್‌ಸಿ ಹೇಳಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next