Advertisement

ನಂಜನಗೂಡಿನಲ್ಲಿ ತಾರಕಕ್ಕೇರಿದ ಅಂದಕಾಸುರ ಸಂಹಾರ ವಿವಾದ

09:37 PM Dec 28, 2023 | Team Udayavani |

ನಂಜನಗೂಡು: ಅಂದಕಾಸುರ ಸಂಹಾರ ಆಚರಣೆ ವಿವಾದ 3 ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ, ದೇವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ್ದಾರೆಂದು ಆರೋಪಿಸಿ, ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಗುರುವಾರ ಶ್ರೀಕಂಠೇಶ್ವರನ ಭಕ್ತರು ದೇಗುಲದ‌ ಮುಂಭಾಗ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಉತ್ಸವಮೂರ್ತಿಯನ್ನು ಅಪವಿತ್ರಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಹಿ ಸಂಗ್ರಹ ಅಭಿಯಾನ ನಡೆಯಿತು. ದೇಗುಲದ ಮುಂಭಾಗ ಬೃಹತ್‌ ಬ್ಯಾನರ್‌ ಅಳವಡಿಸಲಾಗಿತ್ತು. ಸಾವಿರಾರು ಭಕ್ತರು ಬ್ಯಾನರ್‌ನಲ್ಲಿ ಸಹಿ ಹಾಕಿದರು. ತೇರಿನ ಬೀದಿಯಲ್ಲಿ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಕಣ್ಣೀರಿಟ್ಟ ಅರ್ಚಕ: ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದೇಗುಲದ ಹಿರಿಯ ಅರ್ಚಕ‌ರಾದ ಶ್ರೀಕಂಠ ದೀಕ್ಷಿತ್‌, ದೇವರ ಮೂರ್ತಿಗೆ ಎಂಜಲು ನೀರನ್ನು ಎರಚಿ ಅಪವಿತ್ರಗೊಳಿಸಿರುವುದು ಅಪಮಾನಕರ. ಇತಿಹಾಸ ಪ್ರಸಿದ್ಧ ನಂಜನಗೂಡಿನಲ್ಲಿ ಇಂತಹ ಘಟನೆ ನಡೆಯುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ಕಣ್ಣೀರಿಟ್ಟರು.

ಅಂದಕಾಸುರ ಸಂಹಾರ ವಿಚಾರವಾಗಿ ನಡೆದ ವಿವಾದ ಬುಧವಾರ ಆರೋಪ ಪ್ರತ್ಯಾರೋಪ ತಾರಕಕ್ಕೇರಿ ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಲೇರಿ ಎರಡು ಗುಂಪುಗಳ ಸದಸ್ಯರ ಮೇಲೆ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next