Advertisement

Ticket ಸಿಗಲ್ಲ ಎಂದು ಬಾಯಿಗೆ ಬಂದಂತೆ ಅನಂತ್‌ ಮಾತು: ಮಧು ಬಂಗಾರಪ್ಪ

08:31 PM Jan 15, 2024 | Shreeram Nayak |

ಶಿವಮೊಗ್ಗ: ಅನಂತಕುಮಾರ ಹೆಗಡೆ ಒಬ್ಬ ಹುಚ್ಚ. ಈ ಬಾರಿ ಟಿಕೆಟ್‌ ಸಿಗಲ್ಲ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಲ ಅದೇನೇ ಆಗಲಿ ಆ ಹುಚ್ಚನಿಗೆ ಟಿಕೆಟ್‌ ಕೊಡಲಿ. ಸಿಎಂ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.

ನಾಳೆ ಪ್ರಧಾನಿಗೂ ಮಾತನಾಡುತ್ತಾರೆ. ದಕ್ಷಿಣ ಕನ್ನಡದಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಗೂ ಟಿಕೆಟ್‌ ಕೊಡಲಿ. ನೋಡೇ ಬಿಡೋಣ ಯಾರು ಗೆಲ್ತಾರೆ ಅಂತ. ಈ ತರಾ ಹುಚ್ಚರನ್ನ ನೋಡಿದ್ದು ಬಿಜೆಪಿಯಲ್ಲಿ ಮಾತ್ರ. ಬಿಜೆಪಿಯಲ್ಲಿ ಹುಚ್ಚರನ್ನು ಇಟ್ಟುಕೊಂಡಿದ್ದಾರೆ. ಇವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ಹಿಂದುತ್ವ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ.

ಅನಂತಕುಮಾರ್‌ ಹೆಗಡೆ ವಿರುದ್ಧ ಕಾನೂನು ಕ್ರಮ ಆಗಲೇಬೇಕು. ರಾಮ, ಲಕ್ಷ¾ಣ, ಕೃಷ್ಣ ಸೇರಿ ಎಲ್ಲ ದೇವರ ಆಶೀರ್ವಾದ ನಮಗೆ ಇರುತ್ತದೆ. ನಾವು ಎಲ್ಲಾ ದೇವರ ಆಶೀರ್ವಾದ ಪಡೆದು ಚುನಾವಣೆ ಎದುರಿಸುತ್ತೇವೆ ಎಂದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next