Advertisement

ಹಿಂದೂ ಹುಡುಗಿಯರನ್ನು ಮುಟ್ಟಿದ್ರೆ ಅವರ ಕೈ ಕಡಿಯಿರಿ

11:44 AM Jan 27, 2019 | Karthik A |

ಸೋಮವಾರಪೇಟೆ: ವಿವಾದಾತ್ಮಕ ಮತ್ತು ಪ್ರಚೋದನಕಾರಿ ಹೇಳಿಕೆಗಳಿಗೆ ಹೆಸರಾಗಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಇದೀಗ ಇನ್ನೊಂದು ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

Advertisement

‘ಹಿಂದೂ ಹುಡುಗಿಯರ ಮೈಯನ್ನು ಯಾರಾದ್ರೂ ಮುಟ್ಟಿದ್ರೆ ಅಂತಹ ವ್ಯಕ್ತಿಗಳ ಕೈಗಳನ್ನು ಕಡಿಯಿರಿ..’ ಎಂದು ಹೇಳುವ ಮೂಲಕ ಹೆಗಡೆ ಅವರು ಪ್ರಚೋದನಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಸೋಮವಾರಪೇಟೆಯ ಮಾದಾಪುರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಾ ಕೇಂದ್ರ ಸಚಿವ ಹೆಗಡೆ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ತಮ್ಮ ಭಾಷಣದುದ್ದಕ್ಕೂ ರೋಷಭರಿತ ಮಾತುಗಳನ್ನು ಆಡಿರುವ ಹೆಗಡೆ ಅವರು, ‘ಕಮ್ಯುನಿಷ್ಟರು ಸಮಾಜಕ್ಕೆ ಹಿಡಿದಿರುವ ದೊಡ್ಡ ಗೆದ್ದಲು..’ ಎಂದು ತಮ್ಮ ಆಕ್ರೋಶವನ್ನು ಅವರು ಹೊರ ಹಾಕಿದ್ದಾರೆ.

ದೇವರಿಗೂ ಸಹ ಬಲಿಷ್ಠ ಪ್ರಾಣಿಗಳನ್ನು ಯಾವತ್ತೂ ಬಲಿ ಕೊಡುವುದಿಲ್ಲ, ಸಾಧು ಪ್ರಾಣಿಗಳನ್ನು ಮಾತ್ರವೇ ಬಲಿ ಕೊಡುವುದು. ಹಾಗಾಗಿ ನಾವು ಸಮಾಜದಲ್ಲಿ ಬಲಿಷ್ಠರಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ನುಡಿದರು. ಇತಿಹಾಸವನ್ನು ನಾವೀಗ ಬರೆಯುತ್ತೇವೆ, ನಾವು ಬರೆದದ್ದೇ ಇತಿಹಾಸ ಎಂದು ಹೆಗಡೆ ಅವರು ಸಭೆಯ ಕರಾಡತನದ ನಡುವೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next