Advertisement

ಮುಂಬೈನ ಸಿದ್ಧಿವಿನಾಯಕ ದೇಗುಲದಲ್ಲಿ ಅತೃಪ್ತರ ಪೂಜೆ

11:42 PM Jul 12, 2019 | Team Udayavani |

ಮುಂಬೈ: ಕ್ರಮಬದ್ಧವಾಗಿ ರಾಜೀನಾಮೆ ನೀಡಿ ಮತ್ತೆ ಮುಂಬೈಗೆ ವಾಪಸ್ಸಾಗಿರುವ ಹತ್ತು ಅತೃಪ್ತ ಶಾಸಕರ ಪೈಕಿ ನಾಲ್ವರು ಇಲ್ಲಿನ ಪ್ರಸಿದ್ಧ ಸಿದ್ಧಿವಿನಾಯಕ ದೇಗುಲಕ್ಕೆ ಶುಕ್ರವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

Advertisement

ಶಾಸಕರಾದ ಬೈರತಿ ಬಸವರಾಜು, ಎಸ್‌.ಟಿ.ಸೋಮಶೇಖರ, ಶಿವರಾಮ ಹೆಬ್ಬಾರ್‌ ಮತ್ತು ಬಿ.ಸಿ.ಪಾಟೀಲ್‌ ಅವರು ದೇಗುಲಕ್ಕೆ ಭೇಟಿ ನೀಡಿ, ವಿನಾಯಕನ ದರ್ಶನ ಪಡೆದರು.

ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಮುಖ ಮಾಧ್ಯಮ ಸಂಸ್ಥೆಗಳು ಅವರಿಂದ ಪ್ರತಿಕ್ರಿಯೆ, ಫೋಟೋ ತೆಗೆಯಲು ಮುಗಿ ಬಿದ್ದರು. ಭೇಟಿ ವೇಳೆ ಶಾಸಕರಿಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next