Advertisement

Narega: ನರೇಗಾ ಪ್ರಗತಿಗೆ ಜಿಲ್ಲೆಯಲ್ಲಿ ವಿನೂತನ ಅಭಿಯಾನ

10:30 AM Oct 07, 2023 | Team Udayavani |

ರಾಮನಗರ: ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಜಿಲ್ಲೆಯ ಸಾರ್ವ ಜನಿಕರಿಗೆ ಅರಿವು ಮೂಡಿಸಿ ಹೆಚ್ಚು ಪರಿಣಾಮಕಾರಿಯಾಗಿ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಜಿಪಂ ಇದೀಗ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆ ಯೆಡೆಗೆ ಅಭಿಯಾನ ಆಯೋಜಿಸಿದೆ.

Advertisement

ಹೌದು.., 2024-25ನೇ ಸಾಲಿನ ನರೇಗಾ ಆಯವ್ಯಯ ಸಿದ್ಧಪಡಿಸಲು ಮುಂದಾಗಿ ರುವ ಜಿಪಂ ಒಂದು ತಿಂಗಳ ಕಾಲ ಜಿಲ್ಲೆಯ 126 ಗ್ರಾಪಂಗಳ ವ್ಯಾಪ್ತಿಯಲ್ಲಿ ಅಭಿಯಾನ ನಡೆಸಿ ಪ್ರತಿಮನೆಗೂ ಯೋಜನೆಯ ಬಗ್ಗೆ ಮಾಹಿತಿ ತಲುಪಿಸುವ ಮೂಲಕ ಯೋಜನೆ ನೂರಕ್ಕೆ ನೂರಷ್ಟು ಫಲಾನುಭವಿಗಳಿಗೆ ಲಾಭವಾಗುವಂತೆ, ಗ್ರಾಮೀಣಾಭಿವೃದ್ಧಿಗೆ ನರೇಗಾ ಯೋಜನೆ ಸಕಹಾರಿಯಾಗುವಂತೆ ಮಾಡುವುದು ಈ ಯೋಜನೆಯ ಗುರಿಯಾಗಿದೆ.

ಅಭಿಯಾನದ ಮಹತ್ವ: ಜಿಲ್ಲೆಯ 126 ಗ್ರಾಪಂ ವ್ಯಾಪ್ತಿಯಲ್ಲಿ ಪಂಚಾಯ್ತಿ ಅಧ್ಯಕ್ಷರು, ಉಪಾ ಧ್ಯಕ್ಷರು, ಸದಸ್ಯರು, ಪಿಡಿಒ ಮತ್ತು ಗ್ರಾಪಂ ಸಿಬ್ಬಂದಿ ಗಳು ಪ್ರತಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ. 1 ತಿಂಗಳ ಕಾಲ ನಿರಂತರವಾಗಿ ನಡೆಯಲಿರುವ ಈ ಅಭಿಯಾನ ಇಡೀ ಗ್ರಾಪಂ ವ್ಯಾಪ್ತಿಯ ಪ್ರತಿಯೊಂದು ಮನೆಗೆ ನರೇಗಾ ಯೋಜನೆಯ ಬಗ್ಗೆ ಮಾಹಿತಿ ತಲುಪಿಸಲಿದೆ. ಇದ ರೊಂದಿಗೆ ಜಾಗೃತಿ ವಾಹನದ ಮೂಲಕ ಧ್ವನಿವರ್ಧಕರ ಮೂಲಕ ಸಹ ಪ್ರಚಾರ ಮಾಡಲಾಗುತ್ತದೆ. ಇನ್ನು ಅಭಿಯಾನದ ಮೂಲಕ ಕೆಲಸ ಮತ್ತು ಕಾಮಗಾರಿಗಳ ಬೇಡಿಕೆಯನ್ನು ಜನ ರಿಂದ ಸಂಗ್ರಹಿಸಲಾಗುತ್ತದೆ, ಜಾಗೃತಿ ವಾಹನದ ಮೂಲಕ ಗ್ರಾಮಸ್ಥರಿಗೆ ಸ್ವ-ಸಹಾಯ ಸಂಘಗಳಲ್ಲಿ ಸಿಗುವ ಸೌಲಭ್ಯ ಮತ್ತು ಜಲ ಸಂಜೀವಿನಿ ಕಾರ್ಯಕ್ರಮದ ಮಹತ್ವದ ಬಗ್ಗೆ ಪ್ರಚಾರ ಮಾಡಲಾಗುತ್ತದೆ.

ನರೇಗಾ ಯೋಜನೆಯಡಿ ದೊರೆಯುವ ಕೂಲಿ ಮೊತ್ತ, ಗಂಡು ಹೆಣ್ಣಿಗೆ ಸಮಾನ ಕೂಲಿ. ಒಂದು ದಿನ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲ ಸದ ಅವ. ಯೋಜನೆಯಡಿ ದೊರೆಯುವ ವೈಯಕ್ತಿಕ ಸಾಲಗಳು ಮತ್ತು ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಶೇ.50ರಷ್ಟು ರಿಯಾಯತಿ ಸೇರಿದಂತೆ ನರೇಗಾ ಯೋಜನೆಯಡಿ ಲಭ್ಯವಿ ರುವ ಎಲ್ಲಾ ಮಾಹಿತಿಯನ್ನು ಜನತೆಗೆ ತಿಳಿಸು ವುದು ಮತ್ತು ಅವರಿಂದ ಆಗಬೇಕಾಗಿರುವ ಬೇಡಿಕೆ ಯನ್ನು ನೋಂದಣಿ ಮಾಡಿಕೊಳ್ಳಲಾಗುತ್ತದೆ.

ರೈತರಿಗೆ ಮಾಹಿತಿ: ನರೇಗಾ ಯೋಜನೆಯ ಮಾರ್ಗಸೂಚಿ ಯಂತೆ ಒಟ್ಟು ವೆಚ್ಚದ ಶೇ.60 ರಷ್ಟುನ್ನು ಕೃಷಿ ಹಾಗೂ ಕೃಷಿ ಸಂಬಂಧಿತ ಕಾಮಗಾರಿಗೆ ಮೀಸಲಿರಿಸಬೇಕು ಎಂಬ ನಿಯಮ ವಿರುವ ಕಾರಣ ಈ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸವನ್ನು ಯೋಜನೆಯ ಮೂಲಕ ಕೈಗೊಳ್ಳಲಾಗಿದೆ. ಕೃಷಿಕರಿಗೆ ಲಭ್ಯವಾ ಗುವ ವೈಯಕ್ತಿಕ ಕಾಮಗಾರಿಯಗಳ ವಿವರ, ಫಲಾನುಭವಿಗಳ ಆಯ್ಕೆ ಮಾಹಿತಿ.

Advertisement

ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಬಿಪಿಎಲ್‌ ಪಡಿತರ ಚೀಟಿದಾರರನ್ನು ಗುರುತಿಸಿ ಯೋಜನೆ ತಲುಪಿಸಲಾಗುವುದು. ಇನ್ನು ಪ್ರತಿ ಕುಟುಂಬಕ್ಕೆ ಜೀವಿತಾವಧಿಯಲ್ಲಿ 2.50 ಲಕ್ಷರೂ. ಅನುದಾನ ಮಿತಿಗೊಳಿಸಿ, ಯೋಜನೆಯಡಿ ವೈಯಕ್ತಿಕ ಕಾಮಗಾರಿ ನೀಡಲಿದ್ದು, ಈ ಬಗ್ಗೆ ಅಭಿಯಾನದ ಮೂಲಕ ಅರಿವು ಮೂಡಿಸ ಲಾಗುವುದು.

ಮಾಸಾಂತ್ಯಕ್ಕೆ ಗ್ರಾಮ ಸಭೆ: ಅ.30ರಂದು ಗ್ರಾಮ ಸಭೆಯನ್ನು ಆಯೋಜಿಸಲಿದ್ದು, ಗ್ರಾಮಸಭೆಯಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದಂತೆ ವಾರ್ಷಿಕ ಕ್ರಿಯಾಯೋಜನೆಗೆ ಅನುಮೋದನೆ ಪಡೆದುಕೊಳ್ಳ ಬೇಕಿದೆ. ಗ್ರಾಮಸಭೆಗೆ ಮುನ್ನಾ ಜಿಲ್ಲೆಯಾದ್ಯಂತ ಅಭಿಯಾನವನ್ನು ನಡೆಸಿ ಸಾರ್ವಜನಿಕರಲ್ಲಿ ಜಾಗƒತಿ ಮೂಡಿಸಲಾಗುವುದು. ಗ್ರಾಮಸಭೆ ಯಲ್ಲಿ ಚುನಾಯಿತ ಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು, ತಾಂತ್ರಿಕ ಸಹಾಯಕರು ಪಾಲ್ಗೊಂಡು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕಾರ್ಯ ಮಾಡಲಿದ್ದಾರೆ.

ಜಿಲ್ಲೆಯ ಪ್ರತಿಯೊಬ್ಬರಿಗೂ ನರೇಗಾ ಯೋಜನೆಯ ಬಗ್ಗೆ ಮಾಹಿತಿ ನೀಡುವ ಉದ್ದೇಶ ದಿಂದ ಈ ಅಭಿಯಾನವನ್ನು ಜಿಲ್ಲೆಯಲ್ಲಿ ಆರಂಭಿಸಿದ್ದು, ಗ್ರಾಪಂ ಸಿಬ್ಬಂದಿಯ ಜೊತೆಗೆ ಸಾರ್ವ ಜನಿಕರು ಪಾಲ್ಗೊಳ್ಳುವ ಮೂಲಕ ಅಭಿಯಾನ ಯಶಸ್ವಿಗೆ ಸಹಕರಿಸಬೇಕು. ಜಿಲ್ಲೆಯಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಗೊಳಿಸಲು ಈ ಅಭಿಯಾನ ಸಹಕಾರಿ ಯಾಗಿದ್ದು, ಸಾರ್ವಜನಿಕರು, ಚುನಾ ಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ಗಳು ಇದಕ್ಕೆ ಕೈ ಜೋಡಿಸುವ ಮೂಲಕ ಯಶಸ್ವಿಗೆ ಸಹಕರಿಸಿ. ದಿಗ್ವಿಜಯ್‌ಬೋಡ್ಚೆ, ಸಿಇಓ, ಜಿಪಂ, ರಾಮನಗರ

 

Advertisement

Udayavani is now on Telegram. Click here to join our channel and stay updated with the latest news.

Next