Advertisement

ಅಡಕೆ ತೋಟಕ್ಕೆ ಕಾಡಾನೆ ದಾಳಿ

05:28 PM Mar 27, 2022 | Niyatha Bhat |

ತೀರ್ಥಹಳ್ಳಿ: ಶನಿವಾರ ಮಂಡಗದ್ದೆ ಹೋಬಳಿಯ ಸಿಂಗನಬಿದರೆ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತ ಕಾಡಾನೆಗಳು ಅನೇಕ ರೈತರ ತೋಟಗಳಿಗೆ ನುಗ್ಗಿ ಬಾಳೆ ಮತ್ತು ಅಡಕೆ ಮರಗಳನ್ನು ನಾಶ ಮಾಡಿವೆ.

Advertisement

ಸ್ಥಳೀಯ ಮುಖಂಡರ ಮಾಹಿತಿ ಮೇರೆಗೆ ಮಾಜಿ ಸಚಿವ ಮತ್ತು ಕೆಪಿಸಿಸಿ ವಕ್ತಾರರಾದ ಕಿಮ್ಮನೆ ರತ್ನಾಕರ್‌ ಅವರು ಆ ಭಾಗದ ಮುಖಂಡರು ರೈತರೊಂದಿಗೆ ತೋಟಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮಾಹಿತಿ ನೀಡಿದರು.

ತೀರ್ಥಹಳ್ಳಿ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುಡುಬ ರಾಘವೇಂದ್ರ, ಗ್ರಾಮಾಂತರ ಬ್ಲಾಕ್‌ನ ಯುವ ಕಾಂಗ್ರೆಸ್‌ ಅಧ್ಯಕ್ಷ ಪುಟ್ಟೊಡ್ಲು ರಾಘವೇಂದ್ರ, ಬಂಡೆ ವೆಂಕಟೇಶ್‌, ಮಹೇಶ್‌ ಗೌಡ್ರು,ಕಿಗಡಿ ಪುಟ್ಟಸ್ವಾಮಿ ,ಟಿ. ಟಿ. ತಿಮ್ಮಪ್ಪ , ಸಿಂಧುವಾಡಿ ಸತೀಶ್‌, ವೇಲು, ಮನು, ಚಂದ್ರಪ್ಪ ಹಾಗೂ ಹಾನಿಗೊಳಗಾದ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next