Advertisement

Crime: ಚಪ್ಪಲಿಯಲ್ಲಿ ಹೊಡೆಯಲು ಯತ್ನಿಸಿದ ಆಟೋ ಚಾಲಕನಿಗೆ ಕಾರು ಗುದ್ದಿಸಿ ಹತ್ಯೆ

11:08 AM Mar 27, 2024 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ ಆಟೋ ಚಾಲಕನಿಗೆ ಕಾರಿನಿಂದ ಗುದ್ದಿಸಿ ಕೊಲೆ ಮಾಡಿ, ಅಪಘಾತವೆಂದು ಬಿಂಬಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ತಲಘಟ್ಟಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಕೋಣನಕುಂಟೆ ನಿವಾಸಿ ಮುನಿಕೃಷ್ಣ (56) ಬಂಧಿತ. ಆರೋಪಿ ಮಾ.23ರಂದು ಆಟೋ ಚಾಲಕ ಗೋಪಿ(55) ಎಂಬವರನ್ನು ಕೊಲೆಗೈದಿದ್ದ ಎಂದು ಪೊಲೀಸರು ಹೇಳಿದರು.

ಹರಿಹರ ನಿವಾಸಿಯಾದ ಗೋಪಿ ಮತ್ತು ಮಾಲೂರು ನಿವಾಸಿ ಉಮಾಪತಿ ಸ್ನೇಹಿತರಾಗಿದ್ದು, ಕೋಣನಕುಂಟೆಯಲ್ಲಿ ಮಾ.23ರಂದು ರಾತ್ರಿ ವಾಜರಹಳ್ಳಿಯ ಬಾರ್‌ನಲ್ಲಿ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಅದೇ ಬಾರ್‌ಗೆ ಬಂದ ಮುನಿಕೃಷ್ಣನ ಪರಿಚಯವಾಗಿದೆ. ತಡರಾತ್ರಿ ಆಗಿದ್ದರಿಂದ ಬಾರ್‌ ಮುಚ್ಚುತ್ತೇವೆ ಎಂದು ಸಿಬ್ಬಂದಿ ಹೇಳಿದ್ದಾರೆ. ಆಗ ಗೋಪಿ ಮತ್ತು ಉಮಾಪತಿ, “ನಿಮ್ಮ ಕಾರಿನಲ್ಲೇ ಕುಳಿತು ಕುಡಿಯೋಣ ಎಂದು ಮುನಿಕೃಷ್ಣನನ್ನು ಕೇಳಿಕೊಂಡಿದ್ದಾರೆ. ಅದಕ್ಕೆ ಒಪ್ಪಿಕೊಂಡ ಮುನಿಕೃಷ್ಣ, ಇಬ್ಬರನ್ನು ಕಾರಿನಲ್ಲಿ ಕೂರಿಸಿಕೊಂಡು, ಬಾರಿನಿಂದ ಸ್ವಲ್ಪ ದೂರ ಹೋಗಿ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ಮೂವರು ಮದ್ಯ ಸೇವಿಸುತ್ತಿದ್ದರು. ಈ ವೇಳೆ ಗೋಪಿ ಮತ್ತು ಸ್ನೇಹಿತ ಉಮಾಪತಿ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಆಗ ಗೋಪಿ ಅವಾಚ್ಯ ಶಬ್ದಗಳಿಂದ ಮುನಿಕೃಷ್ಣಗೆ ಬೈದು ಚಪ್ಪಲಿಯಿಂದ ಹೊಡೆಯಲು ಮುಂದಾಗಿದ್ದಾನೆ. ಈ ವೇಳೆ ಉಮಾ ಪತಿ, ಗೋಪಿಯನ್ನು ಸಮಾಧಾನಪಡಿಸಿ ತನ್ನೊಂದಿಗೆ ಕರೆದೊಯ್ದಿದ್ದಾನೆ. ಆದರೆ, ಘಟನೆಯಿಂದ ಕೋಪಗೊಂಡಿದ್ದ ಆರೋಪಿ ಕಾರು ಚಲಾಯಿಸಿಕೊಂಡು ಗೋಪಿಗೆ ಗುದ್ದಿ ಕೊಲೆ ಮಾಡಿ ಪರಾರಿಯಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next