Advertisement

Bengaluru: ಕಾರು ಹರಿದು ಒಂದೂವರೆ ವರ್ಷದ ಮಗು ದುರ್ಮರಣ

11:00 AM Apr 24, 2024 | Team Udayavani |

ಬೆಂಗಳೂರು: ತಂದೆ ಚಲಾಯಿಸುತ್ತಿದ್ದ ಕಾರಿಗೆ ಸಿಲುಕಿ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಎಚ್‌ಎಸ್‌ಆರ್‌ ಲೇಔಟ್‌ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಎಚ್‌ಎಸ್‌ಆರ್‌ ಲೇಔಟ್‌ನ ಆಗರ ನಿವಾಸಿ ಒಂದೂವರೆ ವರ್ಷದ ಶೈಹಿಜಾ ಜನ್ನತ್‌ ಮೃತ ಮಗು. ಎಚ್‌ಎಸ್‌ಆರ್‌ ಲೇಔಟ್‌ನ ಆಗರದಲ್ಲಿ ಏ.22 ರಾತ್ರಿ 11.30ರಂದು ಈ ಘಟನೆ ನಡೆದಿತ್ತು.

ಮೃತ ಮಗುವಿನ ತಂದೆ ಸಂಬಂಧಿಯ ಮದುವೆ ಇದ್ದ ಕಾರಣ ಕುಟುಂಬ ಸಮೇತವಾಗಿ ಚನ್ನಪಟ್ಟಣಕ್ಕೆ ಹೋಗಿದ್ದರು. ರಾತ್ರಿ ಕುಟುಂಬ ಸಮೇತವಾಗಿ ಮನೆಗೆ ಹಿಂತಿರುಗಿದ್ದರು. ಮನೆಯ ಬಳಿ ಎಲ್ಲರೂ ಕಾರಿನಿಂದ ಇಳಿದು ಒಳಗೆ ಹೋಗಿದ್ದರು. ಕಾರಿನಲ್ಲಿದ್ದ ಲಗೇಜ್‌ ಅನ್ನು  ಮಗುವಿನ ತಂದೆ ಮನೆಯೊಳಗೆ ಇಡುತ್ತಿದ್ದರು. ಈ ವೇಳೆ ಮನೆಯಲ್ಲಿದ್ದ ಮಗು ತಂದೆ ಹಿಂದೆಯೇ ಹೊರಗೆ ಓಡಿ ಬಂದಿತ್ತು. ಅದನ್ನು ತಂದೆ ಗಮನಿಸಿ ರಲಿಲ್ಲ. ಕಾರಿನ ಹಿಂಬದಿ ಡೋರ್‌ ಬಳಿಯೇ ಮಗು ನಿಂತಿತ್ತು. ಅದನ್ನು ಗಮನಿಸದೆ ತಂದೆ ಆಕಸ್ಮಿಕವಾಗಿ ಮಗುವಿನ ಮೇಲೆ ಕಾರಿನ ಹಿಂಬದಿ ಚಕ್ರ ಹರಿಸಿಕೊಂಡು ಹೋಗಿದ್ದರು. ಕೂಡಲೇ ಸ್ಥಳೀಯರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದ್ದೆ ಎಂದು ಸಂಚಾರ ಪೊಲೀಸರು ಹೇಳಿದರು. ಎಚ್‌ಎಸ್‌ಆರ್‌ ಲೇಔಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next