Advertisement

ನಾಳೆ BJP ವಿರುದ್ಧ ವಿಪಕ್ಷಗಳ ಸಭೆ

11:47 PM Jun 21, 2023 | Team Udayavani |

ಹೊಸದಿಲ್ಲಿ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಮಣಿಸಲು ವಿಪಕ್ಷಗಳನ್ನು ಒಗ್ಗೂಡಿಸುವ ವೇದಿಕೆ ಸಜ್ಜುಗೊಂಡಿದೆ. ಜೂ.23ರಂದು ಪಟ್ನಾದಲ್ಲಿ ನಡೆಯಲಿರುವ ವಿಪಕ್ಷಗಳ ಸಭೆಯಲ್ಲಿ ಬಿಜೆಪಿ ವಿರುದ್ಧ ಒಮ್ಮತದ ಅಭ್ಯರ್ಥಿ, ಜಾತಿಗಣತಿಗೆ ಸಹಮತ, ಕೇಂದ್ರ ಏಜೆನ್ಸಿಗಳ ವಿರುದ್ಧ ಚಳವಳಿ, ಹಿಂದೂ-ಮುಸ್ಲಿಂ ಮತಗಳ ಧ್ರುವೀಕರಣ, ಚುನಾವಣೆ ಕಾರ್ಯತಂತ್ರ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.

Advertisement

ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಬಿಹಾರ ಸಿಎಂ ನಿತೀಶ್‌ ಕುಮಾರ್‌, ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ಎಸ್‌ಪಿ ಮುಖ್ಯಸ್ಥ ಅಖೀಲೇಶ್‌ ಯಾದವ್‌ ಸೇರಿದಂತೆ ಹಲವಾರು ವಿಪಕ್ಷಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಬಿಜೆಪಿ ವಿರುದ್ಧ ಒಮ್ಮತದ ಅಭ್ಯರ್ಥಿಯ ಬಗ್ಗೆ ಗಂಭೀರ ಗಮನಹರಿಸುವ ಸಾಧ್ಯತೆಯಿದೆ. ವಿಪಕ್ಷಗಳು ಕೇಂದ್ರದ ವಿರುದ್ಧ ಒಟ್ಟಾಗಿವೆ ಎಂಬ ಸಂದೇಶ ನೀಡುವುದು ಇದರ ಪ್ರಮುಖ ಉದ್ದೇಶ. ಈಗ ನಡೆಯಲಿರುವ ವಿಪಕ್ಷಗಳ ಸಭೆಯನ್ನು ಜೂ.12ರಂದೇ ನಡೆಸಲು ಯೋಜಿಸಲಾಗಿತ್ತು ಆದರೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬ್ರಿಟನ್‌ ಪ್ರವಾಸದಲ್ಲಿದ್ದ ಕಾರಣ ಸಭೆ ಮುಂದೂಡಲಾಗಿತ್ತು.

ನಿಲುವು ಸ್ಪಷ್ಟವಾಗಲಿ: ದಿಲ್ಲಿ ಆಡಳಿತದ ಪೂರ್ಣ ಹಿಡಿತ ಪಡೆಯಲು ಕೇಂದ್ರ ಸರಕಾರ ಅಧ್ಯಾದೇಶ ಹೊರಡಿಸಿದೆ. ಇದರ ವಿರುದ್ಧ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ದೇಶಾದ್ಯಂತ ವಿಪಕ್ಷ ನಾಯಕರನ್ನು ಭೇಟಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್‌ ಈ ಸಮಸ್ಯೆ ಕೇವಲ ದಿಲ್ಲಿಯದ್ದು ಮಾತ್ರ ಎಂದುಕೊಳ್ಳಬೇಡಿ. ನಾಳೆ ಇದೇ ಪರಿಸ್ಥಿತಿ ಬೇರೆ ರಾಜ್ಯಗಳಿಗೂ ಬರಬಹುದು. ಈ ಹಿನ್ನೆಲೆಯಲ್ಲಿ ವಿಪಕ್ಷಗಳೆಲ್ಲ ಕೇಂದ್ರದ ನಿರ್ಣಯದ ವಿರುದ್ಧ ತಮ್ಮ ಸ್ಪಷ್ಟ ನಿಲುವನ್ನು ಇದೇ ಸಭೆಯಲ್ಲಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next