Advertisement

ಜಿಲ್ಲೆ ರೈತರ ಕೈಗೆಟುಕದ ಬಜೆಟ್

07:09 AM Feb 02, 2019 | Team Udayavani |

ರೈತರು, ಮಧ್ಯಮ ವರ್ಗದವರು, ಬಡವರು, ದೀನ ದಲಿತರು, ಮಹಿಳೆಯರು, ವಿದ್ಯಾರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಬಜೆಟ್ಮಂಡನೆಯಾಗಲಿದೆ ಎಂಬ ನಿರೀಕ್ಷೆ ಹೊಂದಿದ್ದ ಜಿಲ್ಲೆಯ ಜನ ಬಜೆಟ್ ಮಂಡನೆ ಬಳಿಕ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಬಜೆಟ್ ಈ ಬಾರಿ ರೈತರ, ಮಧ್ಯಮ ವರ್ಗ, ಬಡವರು, ವಿದ್ಯಾರ್ಥಿಗಳ ಹಾಗೂ ದಲಿತರ ನಿರೀಕ್ಷೆ ಹುಸಿಗೊಳಿಸಿದೆ. ಯುಪಿಎ ಸರ್ಕಾರದ ಹಳೆಯ ಯೋಜನೆಗಳಿಗೆ ಹೊಸ ಹೆಸರನ್ನು ಸೂಚಿಸಿದೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ವಿಶ್ಲೇಷಿಸುತ್ತಿದ್ದಾರೆ.

Advertisement

ಕೋಲಾರ: ಚುನಾವಣಾ ಸನಿಹದಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್ ಕೋಲಾರ ಜಿಲ್ಲೆಯ ವಿಚಾರದಲ್ಲಿ ಯಾವುದೇ ವಿಶೇಷ ಘೋಷಣೆಗಳಿಲ್ಲದ ರೈತರ ಕೈಗೆಟುಕದ ಬಜೆಟ್ ಎಂದು ಜಿಲ್ಲೆಯ ಜನ ಅಭಿಪ್ರಾಯ ಪಟ್ಟಿದ್ದಾರೆ.

ರೈಲ್ವೆ ಯೋಜನೆಗಳಿಲ್ಲ: ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಯೋಜನೆಗಳಿಗೆ ಸುಮಾರು 65 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ಕರ್ನಾಟಕ ಹಾಗೂ ಕೋಲಾರ ಜಿಲ್ಲೆಯ ರೈಲ್ವೆ ಬೇಡಿಕೆಗಳ ಕುರಿ ತಂತೆ ಚಕಾರವೆತ್ತಿಲ್ಲ. ಇದು ಹಲವು ದಶಕಗಳಿಂದ ರೈಲ್ವೆ ಬೇಡಿಕೆಗಳ ಈಡೇರಿಕೆ ನಿರೀಕ್ಷೆಯಲ್ಲಿರುವ ಜಿಲ್ಲೆಯನ್ನು ನಿರಾಸೆಯಲ್ಲಿ ಮುಳುಗುವಂತೆ ಮಾಡಿದೆ. 5 ವರ್ಷಗಳ ಹಿಂದೆ ಘೋಷಿಸಿದ್ದ ರೈಲ್ವೆ ಕೋಚ್ ತಯಾರಿಕಾ ಘಟಕದ ಬಗ್ಗೆ ಯಾವುದೇ ಚಕಾರವೆತ್ತಿಲ್ಲ.

ಗೋಕುಲ ಆಯೋಗ: ದೇಶದ ಪಶು ಸಂಪತ್ತನ್ನು ಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ಕಾಮಧೇನು ಆಯೋಗ ಸ್ಥಾಪಿಸಲು ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಪಶು ಸಂಪತ್ತು ಹೇರಳವಾಗಿರುವ ಹೈನೋದ್ಯಮ ಕ್ರಾಂತಿ ತನಡೆದಿ ರುವ ಕೋಲಾರ ಜಿಲ್ಲೆಗೆ ಇದರಿಂದ ಅನುಕೂಲ ವಾಗಬಹುದೆಂಬ ನಿರೀಕ್ಷೆ ಇದೆ.

ಆದರೆ, ಪಶುಪಾಲನೆ ಹಾಗೂ ಮೀನುಗಾರಿಕೆ ಅಭಿವೃದ್ಧಿಗೆ ಕೇವಲ 700 ಕೋಟಿ ರೂ.ಗಳನ್ನು ಮಾತ್ರವೇ ಮೀಸಲಿಟ್ಟಿರುವುದನ್ನು ಗಮನಿಸಿದರೆ, ಕೇಂದ್ರ ಸರ್ಕಾರಕ್ಕೆ ಗೋವುಗಳ ಸಂರಕ್ಷಣೆ ವಿಚಾರ ದಲ್ಲಿ ಗೋಪಾಲಕರಿಗೆ ನೆರವಾಗುವ ದೃಷ್ಟಿಯಲ್ಲಿ ಗೋಕುಲ ಆಯೋಗದಿಂದ ಪ್ರಯೋಜನವಾಗದು ಎಂದೇ ಭಾವಿಸಲಾಗುತ್ತಿದೆ.

Advertisement

ನರೇಗಾಗೆ 60 ಸಾವಿರ ಕೋಟಿ ರೂ.: ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 60 ಸಾವಿರ ಕೋಟಿ ರೂ.ಗಳನ್ನು ಮೀಸಲಾಗಿಟ್ಟಿದೆ. ಇದರಿಂದ ಕರ್ನಾಟಕ ರಾಜ್ಯದಲ್ಲಿ ನರೇಗಾ ಅನು ಷ್ಠಾನದಲ್ಲಿ ಮೊದಲ ಸ್ಥಾನದಲ್ಲಿರುವ ಕೋಲಾರ ಜಿಲ್ಲೆಗೆ ಮತ್ತಷ್ಟು ಪ್ರಯೋಜನವಾಗಲಿದೆ. ಇದೇ ವೇಗದಲ್ಲಿ ಕೋಲಾರ ಜಿಲ್ಲೆ ನರೇಗಾ ಅನುಷ್ಠಾನಕ್ಕೆ ಮುಂದಾದರೆ ಬಜೆಟ್‌ನಲ್ಲಿ ಘೋಷಿಸಿರುವ 60 ಸಾವಿರ ಕೋಟಿ ರೂ.ಗಳಿಂದ ಹೆಚ್ಚಿನ ಪ್ರಯೋಜನ ವಾಗಲಿದೆ.

ಪರಿಶಿಷ್ಟ ಅನುದಾನ ಹೆಚ್ಚಳ: ದೇಶದಲ್ಲಿಯೇ ಅತಿ ಹೆಚ್ಚು ಪರಿಶಿಷ್ಟರು ಕೋಲಾರ ಜಿಲ್ಲೆಯಲ್ಲಿ ವಾಸ ಮಾಡುತ್ತಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಈ ಬಾರಿ ಪರಿಶಿಷ್ಟ ಜಾತಿಯವರ ಕಲ್ಯಾಣಕ್ಕಾಗಿ 76 ಸಾವಿರ ಕೋಟಿ ರೂ. ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಕ್ಕಾಗಿ 50 ಸಾವಿರ ಕೋಟಿ ರೂ.ಗಳನ್ನು ನಿಗದಿಪಡಿ ಸಿದೆ. ಈ ಅನುದಾನದಲ್ಲಿ ರೂಪಿಸುವ ಯೋಜನೆ ಗಳ ಪ್ರಯೋಜನ ಕೋಲಾರ ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡದವರಿಗೆ ದಕ್ಕುವ ಸಾಧ್ಯತೆಗಳಿವೆ.

ಪಿಂಚಣಿ ಯೋಜನೆ: ಅಸಂಘಟಿತ ಕಾರ್ಮಿಕರು ಪ್ರತಿ ತಿಂಗಳು 100 ರೂ. ಪಾವತಿಸಿದರೆ 60 ವರ್ಷದ ಬಳಿಕ ಪ್ರತಿ ತಿಂಗಳು 3 ಸಾವಿರ ರೂ.ಗಳ ಪಿಂಚಣಿ ಪಡೆಯಬಹುದು ಎನ್ನುವ ಪ್ರಧಾನ ಮಂತ್ರಿ ಶ್ರಮಯೋಗಿ ಮಂದಾನ್‌ ಪಿಂಚಣಿ ಯೋಜನೆಯನ್ನು ಘೋಷಿಸಲಾಗಿದೆ. ಆದರೆ, ದಿನಗೂಲಿ ಮಾಡುವ ಅಸಂಘಟಿತ ಕಾರ್ಮಿಕರು ಪ್ರತಿ ತಿಂಗಳು 100 ರೂ. ಪಾವತಿಸುವುದಕ್ಕೆ ಕಟ್ಟು ಬೀಳುವುದು ಕಷ್ಟದ ಕೆಲಸವೆಂದು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಅಭಿಪ್ರಾಯವಾಗಿದೆ.

* ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next