Advertisement

ರಂಜಿಸಿದ ಗಾಯನ

06:42 PM Jul 25, 2019 | mahesh |

ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ಉಷಾ ಮತ್ತು ವಿದ್ಯಾ ಇವರಿಂದ ಗಾಯನ ಕಾರ್ಯಕ್ರಮ ಜರಗಿತು. ಮೊದಲನೆಯದಾಗಿ ಹಂಸಧ್ವನಿ ರಾಗ ಆದಿತಾಳದ ವಾತಾಪಿ ಗಣಪತಿಂ ಭಜೆ ಎಂಬ ಗಣಪತಿ ಹಾಡನ್ನು ಆರಂಭಿಸಿ ಅನಂತರ ಆದಿತಾಳದಲ್ಲಿ ಹಿಮಗಿರಿ ತನಯೇ ಹೇಮಲತೆ… ಹಾಡಿ ಮೆಚ್ಚುಗೆಗೆ ಪಾತ್ರರಾದರು.

Advertisement

ಉಷಾ ಅವರಿಂದ ಕೊಳಲುವಾದನ ಮತ್ತು ಸ್ಯಾಕ್ಸೋಫೋನ್‌ ವಾದನದಿಂದ ಬಿಲಹರಿ ರಾಗದ ಶ್ರೀ ಚಾಮುಂಡೇಶ್ವರಿ ಹಾಡನ್ನು ಹಾಡಿ ರಂಜಿಸಿದರು. ಉಷಾ ಮತ್ತು ವಿದ್ಯಾ ಅವರು ಮದ್ದೂರು ಬಾಲಸುಬ್ರಹ್ಮಣ್ಯಂ, ರಾಮ ಭಟ್‌ , ರಾಘವೇಂದ್ರ ಭಟ್‌ ಮತ್ತು ಸುಂದರ ಸೇರಿಗಾರ್‌ ಅಲೆವೂರು ಅವರ ಶಿಷ್ಯರು.

ತವಿಲಿನಲ್ಲಿ ನಾಗೇಶ್‌ ಉದ್ಯಾವರ, ಕೀ ಬೋರ್ಡ್‌ನಲ್ಲಿ ರಮೇಶ್‌ ಪ್ರಭು ಆತ್ರಾಡಿ, ರಿದಂ ಪ್ಯಾಡ್‌ನ‌ಲ್ಲಿ ಗುರುಪ್ರಸಾದ್‌ ಹಾವಂಜೆ, ತಾಳದಲ್ಲಿ ಶ್ರೇಯಸ್‌ ಅಲೆವೂರು ಸಹಕರಿಸಿದರು.

ಶ್ರುತಿ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next