Advertisement

ಅಮೃತಸರ ಗ್ರೆನೇಡ್‌ ದಾಳಿ: ಶಂಕಿತ ವಿದ್ಯಾರ್ಥಿಗಳಿಬ್ಬರ ಬಂಧನ

03:38 PM Nov 20, 2018 | Team Udayavani |

ಅಮೃತಸರ : ಕಳೆದ ಭಾನುವಾರ ನಡೆದಿದ್ದ ಅಮೃತಸರ ಗ್ರೆನೇಡ್‌ ದಾಳಿಗೆ ಸಂಬಂಧಿಸಿ ಭಟಿಂಡಾ ಪೊಲೀಸರು ಇಬ್ಬರು ಶಂಕಿತ ವಿದ್ಯಾರ್ಥಿಗಳನ್ನು ಸೆರೆ ಹಿಡಿದಿದ್ದಾರೆ. 

Advertisement

ಅಮೃತಸರದಲ್ಲಿ ನಡೆಯುತ್ತಿದ್ದ ನಿರಂಕಾರಿ ಪಂಗಡದವರ ಪ್ರಾರ್ಥನಾ ಸಮಾವೇಶದ ಮೇಲೆ ಕಳೆದ ಭಾನುವಾರ ನಡೆದಿದ್ದ ಗ್ರೆನೇಡ್‌ ದಾಳಿಗೆ ಮೂವರು ಬಲಿಯಾಗಿ ಇಪ್ಪತ್ತಕ್ಕೂ ಅಧಿಕ ಮಂದಿ  ಗಾಯಗೊಂಡಿದ್ದರು. 

ಶಂಕಿತ ವಿದ್ಯಾರ್ಥಿಗಳನ್ನು ಭಟಿಂಡಾದ ಅಜಿತ್‌ ರಸ್ತೆಯಲ್ಲಿನ ಗೆಸ್ಟ್‌ ಹೌಸ್‌ ಒಂದರಿಂದ ಬಂಧಿಸಲಾಯಿತು. ಪೊಲೀಸರು ಇವರ ಗುರುತು ಪತ್ರವನ್ನು ಕೇಳಿದಾಗ ಅದನ್ನು ತೋರಿಸಲು ವಿಫ‌ಲರಾದರು; ಅಂತೆಯೇ ಅವರನ್ನು ಈಗ ಪೊಲೀಸರು ಪ್ರಶ್ನಿಸುತ್ತಿದ್ದಾರೆ. 

ಅಮೃತಸರ ನಗರದ ಹೊರವಲಯದಲ್ಲಿನ ರಾಜಾಸಾನ್ಸಿ ಸಮೀಪದ ಅದ್ಲಿವಾಲ್‌ ಗ್ರಾಮದ ಆಶ್ರಮವೊಂದರಲ್ಲಿ ನಡೆಯುತ್ತಿದ್ದ ನಿರಂಕಾರಿ ಪಂಗಡದವರ ಪ್ರಾರ್ಥನಾ ಸಮಾವೇಶದ ಮೇಲೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಗ್ರೆನೇಡ್‌ ದಾಳಿ ನಡೆಸಿ ಪರಾರಿಯಾಗದ್ದರು. 

Advertisement

Udayavani is now on Telegram. Click here to join our channel and stay updated with the latest news.

Next