Advertisement
ಮಲ್ಲಿಕಾರ್ಜುನ ಖರ್ಗೆ ಮಾತ್ರವಲ್ಲದೆ ವಿಪಕ್ಷ ಮೈತ್ರಿಕೂಟ ಇಂಡಿಯಾ ಒಕ್ಕೂಟದಲ್ಲಿನ ುರುತಿಸಿಕೊಂಡಿರುವ ಕೆಲವು ಪಕ್ಷಗಳ ನಾಯಕರಿಗೆ ರಾಷ್ಟ್ರಪತಿ ಭವನದಿಂದ ಆಹ್ವಾನ ನೀಡಲಾಗಿತ್ತಾದರೂ ಈ ಪಕ್ಷಗಳ ನಾಯಕರೆಲ್ಲರೂ ಗೈರಾಗಿದ್ದರು. ಕಾರ್ಯಕ್ರಮಕ್ಕೆ ಗೈರು ಹಾಜರಾಗುವುದಾಗಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಶನಿವಾರವೇ ಪ್ರಕಟಿಸಿದ್ದರು.
ಪದಗ್ರಹಣ ಸಮಾ ರಂಭಕ್ಕೆ ಹಲವು ವಿಶೇಷ ವ್ಯಕ್ತಿಗಳು ಸಾಕ್ಷಿಯಾಗಿದ್ದಾರೆ. ವಂದೇ ಭಾರತ್ ರೈಲಿನ ಮೊದಲ ಮಹಿಳಾ ಲೊಕೊ ಪೈಲಟ್ ಮಹಾರಾಷ್ಟ್ರದ ಸುರೇಖಾ ಯಾದವ್, ಹಿರಿಯ ಸಹಾಯಕ ಲೊಕೋ ಪೈಲಟ್ ಚೆನ್ನೈನ ಐಶ್ವರ್ಯ ಮೆನನ್ ಸೇರಿದಂತೆ 10 ಲೊಕೊಪೈಲಟ್ಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು. ಜತೆಗೆ ನೂತನ ಸಂಸಂತ್ ಭವನದ (ಸೆಂಟ್ರಲ್ ವಿಸ್ಟಾ) ಕಟ್ಟಡ ಕಾರ್ಮಿಕರಿಗೂ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಪತ್ರಕರ್ತರು, ವಕೀಲರು, ವೈದ್ಯರು ಸೇರಿದಂತೆ ವಿವಿಧ ವರ್ಗಗಳ 8000 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.