Advertisement

ಕ್ಷಮಾದಾನ ಅರ್ಜಿ-ವಿಳಂಬ ಸಲ್ಲದು: Supreme Court

11:23 PM Apr 14, 2023 | Team Udayavani |

ಹೊಸದಿಲ್ಲಿ: ಮರಣದಂಡನೆಗೆ ಗುರಿಯಾದ ಅಪರಾಧಿಗಳು ಕ್ಷಮಾದಾನ ಅರ್ಜಿ ನಿರ್ಣಯದಲ್ಲಾಗುವ ವಿಳಂಬದ ಲಾಭ ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸಲು ರಾಜ್ಯ ಸರಕಾರಗಳು ಹಾಗೂ ಸಂಬಂಧಪಟ್ಟ ಪ್ರಾಧಿಕಾರ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
ನ್ಯಾ| ಎಂ.ಆರ್‌ ಶಾ ಹಾಗೂ ನ್ಯಾ|ಸಿ.ಟಿ.ರವಿ ಕುಮಾರ್‌ ಅವರ ನ್ಯಾಯಪೀಠವು, ಸುಪ್ರೀಂ ಕೋರ್ಟ್‌ನ ತೀರ್ಪಿನ ಬಳಿಕವೂ ಕ್ಷಮಾದಾನ ಅರ್ಜಿಗಳ ನಿರ್ಣಯ ವಿಳಂಬವಾಗುತ್ತಿರುವುದನ್ನು ಗಮನಿಸಿದೆ. ಅಲ್ಲದೇ ಇಂಥದ್ದರಿಂದ ಮರಣ ದಂಡನೆ ಶಿಕ್ಷೆಯ ಉದ್ದೇಶವೇ ವ್ಯರ್ಥವಾಗುತ್ತದೆ. ಇನ್ನು ಮುಂದೆ ರಾಜ್ಯ ಸರಕಾರಗಳು ಅಥವಾ ಸಂಬಂಧಪಟ್ಟ ಆಡಳಿತ ಇಂಥ ಅರ್ಜಿಗಳ ನಿರ್ಣಯ, ವಿಲೇವಾರಿ ಖಾತರಿ ಪಡಿಸಬೇಕು. ಆಗಷ್ಟೇ ಅಪರಾಧಿಗೆ ಆತನ ಹಣೆಬರಹ ಏನು ಎಂದು ತಿಳಿಯುವುದು ಹಾಗೂ ಸಂತ್ರಸ್ತರಿಗೆ ನ್ಯಾಯ ದೊರಕುವುದು ಎಂದಿದೆ.

Advertisement

ಮಹಾರಾಷ್ಟ್ರ ಸರಕಾರವು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳ ಪ್ರಕರಣವೊಂದರಲ್ಲಿ ಬಾಂಬೆ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next