Advertisement

“ಮರೆವು’ಬಾಧೆಯಿಂದ ಮುಕ್ಕದವರೆಗೂ ನಡೆದ ವೃದ್ಧ!

03:52 PM Apr 15, 2020 | sudhir |

ಪಡುಬಿದ್ರಿ: ಮರೆವಿನ ಸಮಸ್ಯೆಯಿಂದಾಗಿ ಎರ್ಮಾಳಿನ ಬಾಡ ದೇವಾಡಿಗ (70) ಎಂಬವರು ಮನೆ ದಾರಿ ತಿಳಿಯದೆ ಮುಕ್ಕವರೆಗೆ ತಲುಪಿ, ಅಲ್ಲಿ ಪತ್ತೆಯಾದ ಘಟನೆ ಸೋಮವಾರ ನಡೆದಿದೆ.

Advertisement

ಎರ್ಮಾಳು ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ ಬಾಡ ಅವರು ದೇಗುಲದಿಂದ ನಡೆದುಕೊಂಡು ಮನೆಗೆ ಹೊರಟಿದ್ದರು. ಆದರೆ ಮರೆವಿನಿಂದಾಗಿ ಹೆದ್ದಾರಿಯಲ್ಲಿ ಚೆಕ್‌ಪೋಸ್ಟ್‌ ದಾಟಿ ಮುಕ್ಕದವರೆಗೆ ನಡೆದಿದ್ದಾರೆ. ಮನೆ ಶ್ವಾನವೂ ಹಿಂಬಾಲಿಸಿಕೊಂಡು ಬಂದಿತ್ತು. ಬಾಡ ಅವರನ್ನು ಕಾಣದ್ದರಿಂದ ಮನೆ ಮಂದಿ ಹುಡುಕಾಟ ನಡೆಸಿದ್ದರು. ಸೋಮವಾರ ಪಡುಬಿದ್ರಿ ಠಾಣೆಗೆ ಮಾಹಿತಿ ನೀಡಲಾಗಿದ್ದು, ಅತ್ತ ಮುಕ್ಕ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಬಾಡ ಅವರು ಅಲ್ಲಿ ಇರುವುದು ಗೊತ್ತಾಗಿದೆ. ಕೂಡಲೇ ಪೊಲೀಸರು ಪಡುಬಿದ್ರಿಗೆ ಮಾಹಿತಿ ರವಾನಿಸಿದ್ದಾರೆ. ಮನೆಯವರು ಅಲ್ಲಿಗೆ ತೆರಳಿ ಬಾಡ ಮತ್ತು ನಾಯಿಯನ್ನು ಆಟೋದಲ್ಲಿ ಮನೆಗೆ ವಾಪಸ್‌ ಕರೆತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next