Advertisement

ಅಮ್ಮ ಮಕ್ಕಳ್‌ ಮುನ್ನೇತ್ರ ಕಳಗಂ: ದಿನಕರನ್‌ ಹೊಸ ಪಕ್ಷದ ಹೆಸರು

11:08 AM Mar 15, 2018 | udayavani editorial |

ಚೆನ್ನೈ : ಎಐಎಡಿಎಂಕೆ ಬಂಡುಕೋರ ನಾಯಕ ಟಿ ಟಿ ವಿ ದಿನಕರನ್‌ ಅವರು ಇಂದು ಆರಂಭಿಸಲಿರುವ ತಮ್ಮ ಹೊಸ ಪಕ್ಷಕ್ಕೆ  ಅಮ್ಮ ಮಕ್ಕಳ್‌ ಮುನ್ನೇತ್ರ ಕಳಗಂ ಎಂದು ಹೆಸರಿಟ್ಟಿದ್ದಾರೆ. 

Advertisement

ಮೂಲ ಎಐಎಡಿಎಂಕೆ ಪಕ್ಷದ ಎರಡೆಲೆ ಚಿಹ್ನೆಯನ್ನು ದ್ರೋಹಿಗಳಿಂದ ಮರಳಿ ಪಡೆಯುವ ವರೆಗೆ ತಮ್ಮ ನೂತನ ಪಕ್ಷದ ಚಿಹ್ನೆಯು ಕುಕ್ಕರ್‌ ಆಗಿರುತ್ತದೆ ಎಂದು ದಿನಕರನ್‌ ಹೇಳಿದ್ದಾರೆ.

ತಮ್ಮ ಹೊಸ ಪಕ್ಷದ ಧ್ವಜದಲ್ಲಿ ಜಯಲಲಿತಾ ಅವರ ಚಿತ್ರ ಇರುತ್ತದೆ ಎಂದು ದಿನಕರನ್‌ ಅವರು ಮಧುರೆಯಲ್ಲಿ ತಮ್ಮ ನೂತನ ಪಕ್ಷದ ಚಿಹ್ನೆ ಮತ್ತು ಧ್ವಜವನ್ನು ಅನಾವರಣಗೊಳಿಸಿದರು. 

ಎಐಎಡಿಎಂಕೆ ಬಂಡುಕೋರ ನಾಯಕನಾಗಿರುವ ದಿನಕರನ್‌ ಅವರು ಆರ್‌ ಕೆ ನಗರ ಕ್ಷೇತ್ರಕ್ಕೆ ಈಚೆಗೆ ನಡೆದ ಉಪ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದರು. ಆಗ ಅವರು ಪ್ರಶರ್‌ ಕುಕ್ಕರ್‌ ಚಿಹ್ನೆಯನ್ನು ಬಳಸಿಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next