Advertisement

ಕಮಲಾ ಪಸಂದ್‌ ಸಂಸ್ಥೆಗೆ ನೋಟಿಸ್‌ ಕಳಿಸಿದ ಬಿಗ್‌ಬಿ

07:01 PM Nov 21, 2021 | Team Udayavani |

ಮುಂಬೈ : ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಅವರು ತಮ್ಮ 79ನೇ ಜನ್ಮದಿನದಂದು, ಪಾನ್‌ ಮಸಾಲಾ ಜಾಹೀರಾತಿನೊಂದಿಗಿನ ಒಪ್ಪಂದ ಮುರಿದುಕೊಂಡಿದ್ದಾಗಿ ಘೋಷಿಸಿದ್ದರು.

Advertisement

ಆದರೆ ಅದಾದ ನಂತರವೂ ಕಮಲಾ ಪಸಂದ್‌ ಸಂಸ್ಥೆಯು ಅಮಿತಾಭ್‌ ಅವರ ಪಾನ್‌ ಮಸಾಲಾ ಜಾಹೀರಾತನ್ನು ಪ್ರಸಾರ ಮಾಡಿದೆ.

ಆ ಹಿನ್ನೆಲೆಯಲ್ಲಿ ಅಮಿತಾಭ್‌ ಅವರು ಸಂಸ್ಥೆಗೆ ಕಾನೂನಾತ್ಮಕವಾಗಿ ನೋಟಿಸ್‌ ಕಳುಹಿಸಿಕೊಟ್ಟಿರುವುದಾಗಿ ಮೂಲಗಳು ತಿಳಿಸಿವೆ.

ಪಾನ್‌ ಮಸಾಲವು ತಂಬಾಕಿಗೆ ಸಂಬಂಧಿಸಿರುವುದಾಗಿರುವುದರಿಂದ ಅದರ ಜಾಹೀರಾತಿನಿಂದ ಹೊರಬಂದಿದ್ದಾಗಿ ಈ ಹಿಂದೆ ಬಿಗ್‌ಬಿ ಹೇಳಿಕೊಂಡಿದ್ದರು.

ಇದನ್ನೂ ಓದಿ:ಕಡಬ: ಕಡ್ಯ ಕೊಣಾಜೆ ಪ್ರದೇಶದಲ್ಲಿ ಹಾಡಹಗಲೇ ಮನೆ ಅಂಗಳಕ್ಕೆ ನುಗ್ಗಿದ ಕಾಡಾನೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next