Advertisement

40 ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ : ಅಮಿತಾಭ್‌ ಘೋಷಣೆ

01:40 PM Feb 16, 2019 | Team Udayavani |

ಮುಂಬಯಿ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾಗಿರುವ 40 ಸಿಆರ್‌ಪಿಎಫ್ ಯೋಧರ ಕುಟುಂಬಗಳಿಗೆ ತಾನು ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಇಂದು ಘೋಷಿಸಿದ್ದಾರೆ.

Advertisement

ದುಃಖತಪ್ತ ಹುತಾತ್ಮ ಯೋಧರ ಕುಟುಂಬಗಳಿಗೆ ತ್ವರಿತವಾಗಿ, ಎಲ್ಲಿ ಮತ್ತು ಹೇಗೆ ತಾನು ಘೋಷಿಸಿರುವ ಪರಿಹಾರವನ್ನು ನೀಡಬಹುದು ಎಂಬುದನ್ನು  ವಿವಿಧ ಸರಕಾರಿ ಮೂಲಗಳ ಮೂಲಕ ತಿಳಿದುಕೊಳ್ಳುವ ಪ್ರಯತ್ನವನ್ನು 76ರ ಹರೆಯದ ಅಮಿತಾಭ್‌ ಈಗ ಮಾಡುತ್ತಿದ್ದಾರೆ ಎಂದು ಅವರ ವಕ್ತಾರ ಹೇಳಿದರು. 

ಅಮಿತಾಭ್‌ ಅವರು ನಿನ್ನೆ ಶುಕ್ರವಾರ ತಾವು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದ ವಿರಾಟ್‌ ಕೊಹ್ಲಿ ಪ್ರತಿಷ್ಠಾನದ ಕಾರ್ಯಕ್ರಮವನ್ನು, ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ, ರದ್ದುಪಡಿಸಿದ್ದರು. ಆ ಕಾರ್ಯಕ್ರಮವನ್ನು ಇಂದು ಶನಿವಾರಕ್ಕೆ ನಿಗದಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next