Advertisement

ಅಮಿತ್‌ ಶಾ ಗೃಹ ಸಚಿವರಾದರೆ ದೇಶದ ಗತಿ ಏನು ? ಕೇಜ್ರಿವಾಲ್‌ಗೆ ಚಿಂತೆ

09:09 AM May 11, 2019 | Team Udayavani |

ಹೊಸದಿಲ್ಲಿ : ಲೋಕಸಭಾ ಚುನಾವಣೆಗಳ ಬಳಿಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದರೆ ಅಮಿತ್‌ ಶಾ ಗೃಹ ಸಚಿವರಾಗುತ್ತಾರೆ ಎಂದು ದಿಲ್ಲಿ ಸಿಎಂ, ಆಪ್‌ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಭವಿಷ್ಯ ನುಡಿದಿದ್ದಾರೆ.

Advertisement

‘ಅಮಿತ್‌ ಶಾ ಗೃಹ ಸಚಿವರಾದರೆ ಈ ದೇಶದ ಗತಿ ಏನಾದೀತು ಎಂಬುದನ್ನು ಮತದಾರರು ಚಿಂತಿಸಬೇಕು; ಆದುದರಿಂದ ಅವರು ಮತ ಹಾಕುವ ಮುನ್ನ ಯೋಚಿಸಬೇಕು’ ಎಂದು ಕೇಜ್ರಿವಾಲ್‌ ತಮ್ಮ ಟ್ವೀಟ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದರೆ ಮಾಜಿ ಆರ್ಥಿಕ ಸಲಹೆಗಾರ ಅರವಿಂದ ವೀರಮಣಿ ಮತ್ತು ಮಾಜಿ ಆರ್‌ಬಿಐ ಗವರ್ನರ್‌ ಬಿಮಲ್‌ ಜಲಾನ್‌ ಅವರು ಅರ್ಥ ಸಚಿವರಾಗಲು ಯೋಗ್ಯರಿದ್ದಾರೆ ಎಂದೂ ಕೇಜ್ರಿವಾಲ್‌ ಹೇಳಿದ್ದಾರೆ.

ಇದೇ ಭಾನುವಾರ ಮೇ 12ರಂದು ನಡೆಯುವ ಆರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯಲ್ಲಿ ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next