Advertisement

ಭಿನ್ನಮತ ಶಮನಕ್ಕೆ ಅಮಿತ್‌ ಶಾ ಬರ್ತಾರೆ: ಪ್ರಹ್ಲಾದ್‌ ಜೋಷಿ

10:31 AM Apr 28, 2017 | Team Udayavani |

ಕೋಲಾರ: ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಪಕ್ಷದ ಹೈಕಮಾಂಡ್‌ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಖುದ್ದಾಗಿ ಬರಲಿದ್ದಾರೆಂದು ಸಂಸದ ಪ್ರಹ್ಲಾದ್‌ ಜೋಷಿ ತಿಳಿಸಿದ್ದಾರೆ. 

Advertisement

ಬೆಂಗಳೂರಿನಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಬೆಂಬಲಿಗರ ನಡುವೆ ನಡೆದ ಜಗಳದ ಕುರಿತು ಪ್ರಶ್ನಿಸಿದಾಗ, ಪಕ್ಷದ ಬೆಳವಣಿಗೆಗಳ ಬಗ್ಗೆ ಬಹಿರಂಗ ಚರ್ಚೆ ಮಾಡಬಾರದೆಂದು ಹೈಕಮಾಂಡ್‌ ತಿಳಿಸಿದೆ. ಆದ್ದರಿಂದ ಪ್ರತಿಕ್ರಿಯೆ ನೀಡುವುದಿಲ್ಲ. ಗುರುವಾರ ನಡೆದ ಘಟನೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ನುಣುಚಿಕೊಂಡರು. ಸೊಗಡು ಶಿವಣ್ಣ ಅವರ ಮನೆಗೆ ಮಧ್ಯರಾತ್ರಿ ಹೋಗಿದ್ದರ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಜೋಷಿ, “ನಾನು ಬರಬೇಕಿದ್ದ ವಿಮಾನ ತಪ್ಪಿದ ಕಾರಣ ಬೇರೊಂದು ವಿಮಾನದಲ್ಲಿ ಬಂದಿದ್ದೇನೆ. ಸಮಯ ರಾತ್ರಿ 12.30 ಆಗಿತ್ತು. ಅಲ್ಲದೇ, ನಾನು ಸೊಗಡು ಶಿವಣ್ಣ ಅವರ ಮನೆಗೆ ಊಟಕ್ಕೆ ಹೋಗುವುದು ಮೊದಲೇ ನಿರ್ಧಾರವಾಗಿತ್ತು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next