Advertisement

ಅಳಿಯನನ್ನು ಬಿಟ್ಟುಕೊಡದ ಮಮತಾ ಬ್ಯಾನರ್ಜಿ

10:02 PM Feb 18, 2022 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಳದ ಟಿಎಂಸಿಯಲ್ಲಿ ಒಳಜಗಳಗಳ ನಡುವೆಯೇ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್‌ ಬ್ಯಾನರ್ಜಿಯನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ.

Advertisement

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಸಿ, ಶುಕ್ರವಾರ ಈ ಪ್ರಕಟಣೆ ಹೊರಡಿಸಲಾಗಿದೆ.

ಕೇಂದ್ರದ ಮಾಜಿ ಸಚಿವ ಯಶ್ವಂತ್‌ ಸಿನ್ಹಾ ಅವರ ಜೊತೆ ಹಿರಿಯ ನಾಯಕರಾದ ಸುಬ್ರತಾ ಬಕ್ಷಿ, ಚಂದ್ರಿಮಾ ಭಟ್ಟಾಚಾರ್ಯರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ, ರಾಜ್ಯ ಸಚಿವ ಅರೂಪ್‌ ಬಿಸ್ವಾಸ್‌ರನ್ನು ಕೋಶಾಧಿಕಾರಿಯಾಗಿ, ಕೋಲ್ಕತ ಮೇಯರ್‌ ಫಿರ್ಹಾದ ಹಕೀಮ್‌ರನ್ನು ಸಮನ್ವಯ ಉಸ್ತುವಾರಿಯಾಗಿ ನೇಮಿಸಲಾಗಿದೆ.

ಕಾಂಗ್ರೆಸ್‌ನಿಂದ ಟಿಎಂಸಿಗೆ ಬಂದಿರುವ ಸುಷ್ಮಿತಾ ದೇವ್‌ ಮತ್ತು ಮುಕುಲ್‌ ಸಂಗಮ್‌ಗೆ ಈಶಾನ್ಯ ಭಾಗದಲ್ಲಿನ ಪಕ್ಷದ ಘಟಕಗಳ ಜವಾಬ್ದಾರಿ ಕೊಡಲಾಗಿದೆ.

ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಮಿತಿಯಲ್ಲಿ ಒಳಜಗಳ ಉಂಟಾದ ಹಿನ್ನೆಲೆ, ಮಮತಾ ಬ್ಯಾನರ್ಜಿ ಅವರು ಕಳೆದ ವಾರ ಪೂರ್ತಿ ಸಮಿತಿಯನ್ನು ವಿಸರ್ಜಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next