Advertisement

ಕಲಾಮಂಡಲಂ ವಿವಿ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರಿಗೆ ಅರ್ಧಚಂದ್ರ

01:31 PM Nov 11, 2022 | Team Udayavani |

ತಿರುವನಂತಪುರ: ಕೇರಳದ ವಿವಿಗಳ ಕುಲಾಧಿಪತಿ ಸ್ಥಾನದಿಂದ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಅವರನ್ನು ಮುಕ್ತಿಗೊಳಿಸುವ ಪ್ರಕ್ರಿಯೆ ಶುರುವಾಗಿದೆ. ಅದಕ್ಕೆ ಪೂರಕವಾಗಿ ತ್ರಿಶ್ಶೂರ್‌ ಜಿಲ್ಲೆಯ ಚೆರುತುರುತ್ತಿಯಲ್ಲಿ ಇರುವ ಲಲಿತಕಲೆಗಳ ವಿವಿ ಕೇರಳ ಕಲಾಮಂಡಲಂ ಡೀಮ್ಡ್ ವಿವಿಯ ಕುಲಾಧಿಪತಿ ಸ್ಥಾನದಿದ ತೆಗೆದು ಹಾಕಲಾಗಿದೆ. ರಾಜ್ಯಪಾಲರ ಸ್ಥಾನದಲ್ಲಿ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಯೊಬ್ಬರನ್ನು ಈ ಸ್ಥಾನಕ್ಕೆ ನೇಮಿಸಲು ಎಲ್‌ಡಿಎಫ್ ಸರ್ಕಾರ ನಿರ್ಧರಿಸಿದೆ.

Advertisement

ರಾಜ್ಯಪಾಲರು ಮತ್ತು ಕೇರಳ ಸರ್ಕಾರದ ನಡುವೆ ವಿವಿಗಳಲ್ಲಿ ನೇಮಕ ವಿಚಾರದಲ್ಲಿ ಎದ್ದಿರುವ ಭಿನ್ನಮತದ ಫ‌ಲಿತಾಂಶವಾಗಿ ಈ ಬೆಳವಣಿಗೆಯಾಗಿದೆ.

ಬುಧವಾರ ನಡೆದಿದ್ದ ಕೇರಳ ಸಂಪುಟದಲ್ಲಿ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ಬಿಡುಗಡೆಗೊಳಿಸುವ ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next