Advertisement

ನಿಂತಿದ್ದ ಲಾರಿಗೆ ಅಂಬುಲೆನ್ಸ್‌ ಢಿಕ್ಕಿ: ನಾಲ್ವರ ದಾರುಣ ಸಾವು 

10:52 AM Nov 18, 2018 | |

ಬೆಂಗಳೂರು: ಆನೇಕಲ್‌ನ ಗಡಿ ಭಾಗವಾಗಿರುವ ಹೊಸೂರಿನ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಭಾನುವಾರ ನಸುಕಿನ ವೇಳೆ ನಿಂತಿದ್ದ ಲಾರಿಗೆ ಅಂಬುಲೆನ್ಸ್‌ ಢಿಕ್ಕಿಯಾಗಿ ಎಚ್‌1ಎನ್‌1 ರೋಗಿ ಸೇರಿ ನಾಲ್ವರು ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

Advertisement

ತಿರುಚ್ಚಿಯಿಂದ ಎಚ್‌1ಎನ್‌1 ನಿಂದ ಬಳಲುತ್ತಿದ್ದ ಮದನ್‌ ಎನ್ನುವವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆ ತರುವಾಗ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ.

ಅಪಘಾತದ ತೀವ್ರತೆಗೆ ರೋಗಿ ಮದನ್‌,ಚಾಲಕ ಜಯ ಸೂರ್ಯ ಸೇರಿ ಅಂಬುಲೆನ್ಸ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. 

ಸ್ಥಳಕ್ಕೆ ಹೊಸೂರು ಹುಡ್ಕೋ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಶವಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿರಿಸಿದ್ದಾರೆ.

ಮೃತರ ಪೈಕಿ ಇಬ್ಬರು ರೋಗಿಯ ಮನೆಯವರಾಗಿದ್ದು ಅವರ ಹೆಸರುಗಳು ಇನ್ನಷ್ಟೇ ತಿಳಿದು ಬರಬೇಕಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next