Advertisement

ಪಡುಬಿದ್ರಿ: ಪೊಲೀಸ್ ಸಿಬ್ಬಂದಿಗೆ ಆ್ಯಂಬುಲೆನ್ಸ್ ಢಿಕ್ಕಿ; ಅಪಾಯದಿಂದ ಪಾರು

05:14 PM Jun 10, 2021 | Team Udayavani |

ಪಡುಬಿದ್ರಿ: ದ್ವಿಚಕ್ರ ವಾಹನಕ್ಕೆ ಆ್ಯಂಬುಲೆನ್ಸ್ ಢಿಕ್ಕಿಯಾಗಿ ಮಹಿಳಾ ಪೊಲೀಸ್ ಸಿಬ್ಬಂದಿ ಗಾಯಗೊಂಡ ಘಟನೆ ಪಡುಬಿದ್ರಿ ಪೇಟೆಯಲ್ಲಿ ಗುರುವಾರ ಸಂಭವಿಸಿದೆ.

Advertisement

ಪಡುಬಿದ್ರಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಅನಿತಾ, ದ್ವಿಚಕ್ರ ವಾಹನ ಸವಾರಿ ಮಾಡಿಕೊಂಡು ಠಾಣೆಯಿಂದ ಕಾರ್ಕಳ ರಸ್ತೆ ಕಡೆಗೆ ಸಲಿಸುತ್ತಿದ್ದಾಗ, ಮಂಗಳೂರಿನಿಂದ ಕಾರವಾರಕ್ಕೆ ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್, ರಾಷ್ಟ್ರೀಯ ಹೆದ್ದಾರಿ 66 ರ ಪಡುಬಿದ್ರಿ-ಕಾರ್ಕಳ ರಸ್ತೆ ಜಂಕ್ಷನ್ ಬಳಿ ಢಿಕ್ಕಿಯಾಗಿದೆ.

ಇದನ್ನೂ ಓದಿ:ಪಾಸಿಟಿವ್ ಗೆದ್ದೇ ಗೆಲ್ಲುತ್ತದೆ : ಓದುಗರೊಬ್ಬರಿಂದ ಪಿಡಿಎಫ್ ಆದ ಉದಯವಾಣಿ ಸುದ್ದಿಗಳು ವೈರಲ್

ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಅನಿತಾ ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ಅತೀ ವೇಗವಾಗಿ ಬಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್, ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಡಿವೈಡರ್ ಮೇಲೇರಿದ ಪರಿಣಾಮ ಪೊಲೀಸ್ ಟ್ರಾಫಿಕ್ ಬೂತ್ ಹಾಗು ವೇಗ ತಡೆಗೆ ಇರಿಸಲಾದ ಡ್ರಮ್ ಗಳು ಹಾನಿಗೊಂಡಿದೆ.

ಆ್ಯಂಬುಲೆನ್ಸ್ ನಲ್ಲಿದ್ದ ಮೃತದೇಹವನ್ನು ಮತ್ತೊಂದು ಆ್ಯಂಬುಲೆನ್ಸ್ ನಲ್ಲಿ ಕಾರವಾರಕ್ಕೆ ಸಾಗಿಸಲಾಗಿದೆ. ಘಟನೆ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next