Advertisement

ಸದೃಢ ದೇಶಕ್ಕೆ ಅಂಬೇಡ್ಕರ್‌ ಕೊಡುಗೆ ಅಪಾರ

04:16 PM Apr 15, 2021 | Team Udayavani |

ಮಧುಗಿರಿ: ದೇಶ ಇಂದು ಪ್ರಜಾಪ್ರಭು ತ್ವದತಳಹದಿ ಮೇಲೆ ನಿಂತಿದ್ದು, ಸದೃಢ ಭಾರತದಪಿತೃ ಡಾ.ಬಿ.ಆರ್‌. ಅಂಬೇಡ್ಕರ್‌ ಇದಕ್ಕೆಮೂಲ ಕಾರಣಕರ್ತರು ಎಂದರು ಶಾಸಕಎಂ.ವಿ.ವೀರಭದ್ರಯ್ಯ ತಿಳಿಸಿದರು.ಪಟ್ಟಣದ ಪಾವಗಡ ವೃತ್ತದಲ್ಲಿ ತಾಲೂ ಕು ಆಡಳಿತ, ಪುರಸಭೆ ವತಿಯಿಂದ ನಡೆದ ಡಾ.ಬಿ. ಆರ್‌. ಅಂಬೇಡ್ಕರ್‌ 130ನೇ ಜಯಂತಿಪ್ರಯುಕ್ತ ಅವರ ಪುತ್ಥಳಿಗೆ ಮಾಲಾ ರ್ಪಣೆಮಾಡಿ ಮಾತನಾಡಿದ ಅವರು, ದೇಶ ಇಂದುಪ್ರಜಾಪ್ರಭುತ್ವದ ತಳ ಹದಿಯ ಮೇಲೆ ನಿಂತಿದ್ದು, ಸಾಕಷ್ಟು ಅಭಿ ವೃದ್ಧಿಯಾಗಿದೆ.

Advertisement

ಕಾನೂನುಎಂಬು ದು ಬಡವ ಬಲ್ಲಿದನಿಗೂ ಸಮಾನವಾಗಿ ದ್ದು, ಸಂವಿಧಾನ ಎಲ್ಲರ ರಕ್ಷಣೆ ಮಾಡುತ್ತಿದೆ. ಸದೃಢ ದೇಶದಲ್ಲಿನ ಕಾನೂ ನು ಎಷ್ಟರಮಟ್ಟಿಗೆ ಕಾರಣವಾಗುತ್ತದೆ ಎಂಬ ಪರಿಕಲ್ಪನೆಯನ್ನು ಹಿಂದೆಯೇ ಹಾಕಿ ಕೊಟ್ಟ ಮಹಾಜ್ಞಾನಿಅಂಬೇಡ್ಕರ್‌ ಎಂದರು.

ಪ್ರಜಾಪ್ರಭುತ್ವದ ಬೇರು ಗಟ್ಟಿ: ಸ್ನೇಹ,ಸಹಬಾಳ್ವೆ, ಸಮಾನತೆಯನ್ನು ದೇಶದಲ್ಲಿಸಮಾನ ವಾಗಿ ಹಂಚಿದ ಕೀರ್ತಿ ಅಂಬೇಡ್ಕರ್‌ಗೆ ಸಲ್ಲಬೇಕು. ವಿವಿಧತೆಯಲ್ಲಿ ಏಕತೆಮೂಡಿಸಿದ ತತ್ವಜ್ಞಾನಿ.

ಇಂದಿಗೂ ಇವರುರಚಿಸಿದ ಸಂವಿಧಾನದಲ್ಲಿ ಪ್ರಜಾಪ್ರಭುತ್ವದಬೇರುಗಳು ಗಟ್ಟಿಯಾಗಿದ್ದು, ದೇಶದ ಸಾರ್ವಭೌಮತ್ವವನ್ನು ಕಾಪಾಡುತ್ತಿದೆ. ಮುಖ್ಯವಾಗಿಅವರು ನೀಡಿದ ಮೂಲಭೂತ ಹಕ್ಕುಗಳುಹಾಗೂ ಕರ್ತವ್ಯಗಳನ್ನು ಪಾಲಿಸುವುದರಿಂದದೇಶದಲ್ಲಿ ಶಾಂತಿ ನೆಲಸಲಿದೆ ಎಂದರು.ಇಂತಹ ಮಹಾನ್‌ ಚೇತನರ 130ನೇಹುಟ್ಟುಹಬ್ಬ. ಇದನ್ನು ಹಬ್ಬದ ರೀತಿ ಆಚರಿಸಲು ಕೊರೊನಾ ನಿಯಮ ಅಡ್ಡಿಯಾಗಿದೆ.

ಆದ್ದರಿಂದ ಈ ಕೊರೊನಾ ಮಾರಕ ರೋಗನಾಶವಾದ ನಂತರ ಅವರ ಹುಟ್ಟುಹಬ್ಬವನ್ನುಅದ್ಧೂರಿಯಾಗಿ ಆಚರಿಸಲು ಎಲ್ಲ ಕ್ರಮಕೈಗೊಳ್ಳಲಾಗುವುದು. ಕೋವಿಡ್‌ ಸಮಸ್ಯೆಹೆಚ್ಚುತ್ತಿದ್ದು, ಸರ್ಕಾರದ ನಿಯಮವನ್ನುದಯ ಮಾಡಿ ಪಾಲಿಸಬೇಕು ಎಂದರು.ಡಿವೈಎಸ್ಪಿ ರಾಮಕೃಷ್ಣಪ್ಪ, ಗ್ರೇಡ್‌-2ತಹಶೀಲ್ದಾರ್‌ ಕಮಲಮ್ಮ, ತಾಪಂ ಇಒದೊಡ್ಡಸಿದ್ದಯ್ಯ, ಪುರಸಭೆ ಅಧ್ಯಕ್ಷತಿಮ್ಮರಾಜು, ಸದಸ್ಯ ಜಗಣ್ಣ, ಗಂಗರಾಜು,ಚಂದ್ರಶೇಖರ ಬಾಬು, ನಾರಾಯಣ್‌,ಮುಖ್ಯಾಧಿಕಾರಿ ಅಮರನಾರಾಯಣ್‌,ಕೃಷಿ ಇಲಾಖೆ ಎಡಿ ಹನುಮಂತರಾಯಪ್ಪ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಹರೀಶ್‌, ದಲಿತ ಮುಖಂಡಡಾ.ಸಂಜೀವಮೂರ್ತಿ, ಶಿವಕುಮಾರ್‌,ನರಸಿಂಹಮೂರ್ತಿ, ಸರ್ಕಾರಿ ನೌಕರರಸಂಘದ ಅಧ್ಯಕ್ಷ ವೆಂಕಟೇಶ್‌, ಖಜಾಂಚಿಚಿಕ್ಕರಂಗಪ್ಪ, ಸಿಪಿಐ ಸರ್ದಾರ್‌, ಪಿಎಸ್‌ಐಮಂಗಳಗೌರಮ್ಮ, ಜೆಡಿಎಸ್‌ ಮುಖಂಡತುಂಗೋಟಿ ರಾಮಣ್ಣ, ಎಸ್ಸಿ ಘಟಕದ ಅಧ್ಯಕ್ಷಗುಂಡಗಲ್ಲು ಶಿವಣ್ಣ, ಮುಖಂಡಗೋವಿಂದರಾಜು, ಶಿವಪ್ಪ ನಾಯಕ, ಶμàಕ್‌ಅಹ್ಮದ್‌, ರಾಮು, ಧನಪಾಲ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next