Advertisement

ಕೋವಿಡ್‌ ನಡುವೆ ಅಂಬೇಡ್ಕರ್‌ ಜಯಂತಿ

01:19 PM Apr 12, 2021 | Team Udayavani |

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ ಆತಂಕದಲ್ಲೂ ಅಂಬೇಡ್ಕರ್‌ ಜಯಂತಿಯನ್ನು ಕೋವಿಡ್‌ ಮಾರ್ಗಸೂಚಿ ಅನ್ವಯಅರ್ಥಪೂರ್ಣವಾಗಿ ಆಚರಿಸಲು ವಿವಿಧ ದಲಿತ ಸಂಘಟನೆಗಳ ಮುಖಂಡರು ನಿರ್ಧರಿಸಿದರು.

Advertisement

ನಗರದ ನಚಿಕೇತ ನಿಲಯದ ಬುದ್ಧ ಮಂದಿರದಲ್ಲಿಅಂಬೇಡ್ಕರ್‌ ಜಯಂತಿ ಆಚರಣೆ ಪ್ರಯುಕ್ತ ಸಭೆ ಸೇರಿದ್ದ ವಿವಿಧದಲಿತ ಸಂಘಟನೆಗಳ ಮುಖಂಡರು ಸುಮಾರು ಎರಡುಗಂಟೆಗಳ ಕಾಲ ಸುದೀರ್ಘ‌ವಾಗಿ ಚರ್ಚಿಸಿ, ಅಂಬೇಡ್ಕರ್‌ಜಯಂತಿಯನ್ನು ಜಿಲ್ಲಾಡಳಿತ ಹೊರತು ಪಡಿಸಿ ಪ್ರತ್ಯೇಕವಾಗಿ ಆಚರಿಸಲು ತೀರ್ಮಾನಿಸಿದರು.

ಕೋವಿಡ್‌ ಆತಂಕದಲ್ಲಿ ಅಂಬೇಡ್ಕರ್‌ ಜಯಂತಿ ಸ್ತಬ್ಧಚಿತ್ರಗಳ ಮೆರವಣಿಗೆ, ಸಾಂಸ್ಕೃತಿಕ ಕಾರ್ಯ ಕ್ರಮಗಳು, ಜಾನಪದ ಕಲಾತಂಡಗಳ ಮೆರವಣಿಗೆಯನ್ನು ನಡೆಸಲುಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದ್ದು,ಇದರಿಂದ ಕುಪಿತಗೊಂಡಿರುವ ದಲಿತ ಸಂಘಟನೆಗಳ ಮುಖಂಡರು ಜಿಲ್ಲಾಡಳಿತ ಹೊರತುಪಡಿಸಿ ಪ್ರತ್ಯೇಕವಾಗಿಯೇ ಅಂಬೇಡ್ಕರ್‌ ಜಯಂತಿ ಆಚರಿಸಲು ಸರ್ವಾನುಮತದ ನಿರ್ಣಯ ತೆಗೆದುಕೊಂಡರು. ಐದು ವರ್ಷಗಳಿಂದಲೂ ಚುನಾವಣೆ ನೀತಿಸಂಹಿತೆ, ಕೊರೊನಾ ಲಾಕ್‌ಡೌನ್‌ ಇತ್ಯಾದಿ ಕಾರಣಗಳಿಂದ ಅಂಬೇಡ್ಕರ್‌ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿಲ್ಲ. ಈ ಬಾರಿಯೂಕೋವಿಡ್‌ ಅಂತಕ ಇದೆ ಎಂಬ ಕಾರಣಕ್ಕೆ ಅಂಬೇಡ್ಕರ್‌ ಜಯಂತಿ ಅಚರಣೆಗೆ ಜಿಲ್ಲಾಡಳಿತ ಅವಕಾಶ ನೀಡದಿರುವುದು ಸರಿಯಲ್ಲ ಎಂದು ಮುಖಂಡರು ದೂರಿದರು.

ಜಿಲ್ಲಾಡಳಿತ ನಡೆಸುವ ಅಂಬೇಡ್ಕರ್‌ ಜಯಂತಿಗೆ ಪರ್ಯಾಯವಾಗಿಯೇ ದಲಿತ ಸಂಘಟನೆಗಳೇ ಅಂಬೇಡ್ಕರ್‌ಜಯಂತಿಯನ್ನು ಪ್ರತ್ಯೇಕವಾಗಿ ಪರ್ಯಾಯವಾಗಿ ಸ್ತಬ್ಧಚಿತ್ರಗಳಮೆರವಣಿಗೆ ಮೂಲಕ ನಡೆಸಲು ತೀರ್ಮಾನಿಸಲಾಯಿತು.ದಲಿತ ಮುಖಂಡರಾದ ಡಾ.ಚಂದ್ರಶೇಖರ್‌, ಮುನಿರಾಜು, ಟಿ.ವಿಜಯಕುಮಾರ್‌, ನಾಗನಾಳ ಮುನಿಯಪ್ಪ, ಮಹಾನ್‌ ನಾರಾಯಣಸ್ವಾಮಿ, ಅಂಬೇಡ್ಕರ್‌ ಚಲಪತಿ, ಹಾರೋಹಳ್ಳಿ ರವಿ, ಅಪ್ಪಿ ನಾರಾಯಣಸ್ವಾಮಿ, ಮಾಜೇìನಹಳ್ಳಿ ಬಾಬು,ಗಾಂಧಿನಗರ ವೆಂಕಟೇಶ್‌, ಮುನಿವೆಂಕಟಪ್ಪ, ನರಸಾಪುರನಾರಾಯಣ ಸ್ವಾಮಿ, ಖಾಜಿಕಲ್ಲಹಳ್ಳಿ ನಾರಾಯಣಸ್ವಾಮಿ, ಗಂಗಮ್ಮನಪಾಳ್ಯ ರಾಮಯ್ಯ, ವರದೇನಹಳ್ಳಿ ವೆಂಕಟೇಶ್‌, ವೇಣು, ವಲ್ಲಬ್ಬಿ ಮಂಜು, ಶಾಮಸುಂದರ್‌, ಸುಬ್ಬು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next