Advertisement

ಗಣಿಗ ರವಿ ಭೇಟಿಗೆ ಸಿಗದ ಅಂಬರೀಶ್‌ 

07:40 AM Apr 26, 2018 | |

ಬೆಂಗಳೂರು: ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗಣಿಗ ರವಿ, ಹಾಲಿ ಶಾಸಕ ಅಂಬರೀಶ್‌ ಅವರನ್ನು ಭೇಟಿ ಮಾಡಲು ಆಗಮಿಸುವ ಮೊದಲೇ ಅಂಬರೀಶ್‌ ಮನೆಯಿಂದ ತೆರಳಿದ ಪ್ರಸಂಗ ನಡೆದಿದೆ. 

Advertisement

ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ಅಂಬರೀಶ್‌ರನ್ನು ಮಂಡ್ಯದಲ್ಲಿ ತಮ್ಮ ಪರವಾಗಿ ಪ್ರಚಾರ ನಡೆಸಲು ಮನವಿ ಮಾಡಿಕೊಳ್ಳಲು ರವಿ ಗಣಿಗ ಬೆಂಗಳೂರಿನ ಅಂಬರೀಶ್‌ ಅವರ ಮನೆಗೆ ಭೇಟಿಗೆ ಹೊರಟಿದ್ದರು. ಈಮಾಹಿತಿ ಪಡೆದ ಅಂಬರೀಶ್ ಐಪಿಎಲ್‌ ಕ್ರಿಕೆಟ್‌ ನೋಡುವ ನೆಪದಲ್ಲಿ ಮನೆಯಿಂದ ಹೊರ ಹೋದರು.

ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅಂಬರೀಶ್‌,”ನಾನೇ ಮಂಡ್ಯದಲ್ಲಿ ಅಭ್ಯರ್ಥಿ,ನಾನು ಕ್ರಿಕೆಟ್‌ ಮ್ಯಾಚ್‌ ನೋಡಲು ಹೋಗುತ್ತಿದ್ದೇನೆ’ ಎಂದು ಹೇಳಿ ಹೊರಟರು.

Advertisement

Udayavani is now on Telegram. Click here to join our channel and stay updated with the latest news.

Next