Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಮುನಿಸಿಲ್ಲ:ಅಂಬರೀಷ್‌ ಸುದ್ದಿಗೋಷ್ಠಿ

05:03 PM Apr 14, 2017 | |

ಮಂಡ್ಯ: ನಂಜನಗೂಡು,ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಮಾಜಿ ಸಚಿವ,ಶಾಸಕ ಅಂಬರೀಷ್‌ ಅವರು  ಶುಕ್ರವಾರ ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ್ದು, ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಯಾವುದೇ ಮುನಿಸಿಲ್ಲ, ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷ ಬಿಡುವುದಿಲ್ಲ ಎಂದಿದ್ದಾರೆ.

Advertisement

ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಹರ್ಷ ವ್ಯಕ್ತ ಪಡಿಸಿದ ಅಂಬರೀಷ್‌ ಇನ್ನೂ ಒಂದು ವರ್ಷಗಳ ಕಾಲ ನಮ್ಮ ಸರ್ಕಾರದ ಆಡಳಿತವಿದೆ, ಜನ ವಿಶ್ವಾಸ ಇರಿಸಿ ಮತ ನೀಡಿದ್ದು ಜನರಿಗೆ ಒಳ್ಳೆಯದಾಗಲಿ ಎಂದರು.

ನನಗೆ ಎಲ್ಲವನ್ನೂ ಕೊಟ್ಟಿರುವ ಕಾಂಗ್ರೆಸ್‌ ಪಕ್ಷವನ್ನು ತ್ಯಜಿಸುವುದಿಲ್ಲ. ಮುಖ್ಯಮಂತ್ರಿಗಿಂತ ಹೆಚ್ಚು ಪ್ರೀತಿಯಿಂದ ನನ್ನನ್ನು ಜನ ನೋಡಿಕೊಂಡಿದ್ದಾರೆ. ಮೂರು ವರೆ ವರ್ಷಗಳ ಕಾಲ ಸಚಿವನಾಗಿ ಕೆಲಸ ಮಾಡಿದ್ದೆ ,ಬೇರೆಯವರಿಗೂ ಅವಕಾಶ ಸಿಗಬೇಕಲ್ಲ ಎಂದರು. 

ಮುಂದಿನ ಚುನಾವಣೆ ಸ್ಪರ್ಧೆಯ ಬಗ್ಗೆ ಈಗಲೇ ಯಾವುದೆ ನಿರ್ಧಾರಕ್ಕೆ ಬಂದಿಲ್ಲ. ಇನ್ನೂ ಒಂದು ವರ್ಷ ಬಾಕಿ ಇದೆ , ಭವಿಷ್ಯವನ್ನು  ಬಲ್ಲವರು ಯಾರು ಎಂದರು.

ಸಚಿವ ಸ್ಥಾನದಿಂದ ಕೈ ಬಿಟ್ಟ ಬಳಿಕ ತೀವ್ರ ಅಸಮಧಾನಗೊಂಡಿದ್ದ ಅಂಬರೀಷ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿ ರಾಜೀನಾಮೆ ಪತ್ರ ಕಳುಹಿಸಿಕೊಟ್ಟು ಆ ಬಳಿಕ  ನಿರ್ಧಾರದಿಂದ ಹಿಂದೆ ಸರಿದಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next