Advertisement

ಅಂಬಿ ಬೆಂಬಲಿಗರ ಸಭೆ; ಸ್ಪರ್ಧೆ ಕುರಿತು ಎಪ್ರಿಲ್‌ 2 ರಂದು ನಿರ್ಧಾರ 

03:28 PM Mar 31, 2018 | Team Udayavani |

ಬೆಂಗಳೂರು : ಮಂಡ್ಯ ಶಾಸಕ ಅಂಬರೀಷ್‌ ಅವರು ಆರೋಗ್ಯ ಸಮಸ್ಯೆಯಿಂದ ಈ ಬಾರಿಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕೊ ಬೇಡವೊ ಎಂಬ ಗೊಂದಲದಲ್ಲಿದ್ದು ಅಭಿಮಾನಿಗಳ ಸಭೆ ಕರೆದು ಚರ್ಚೆ ನಡೆಸುತ್ತಿದ್ದಾರೆ.

Advertisement

ಶನಿವಾರ ಬೆಂಗಳೂರಿನಲ್ಲಿ ಅಭಿಮಾನಿಗಳ ಸಭೆ ನಡೆಸಿ ಈ ವೇಳೆ ಕೆಲ ವಿಚಾರಗಳ ಕುರಿತು ಬೇಸರವನ್ನೂ ವ್ಯಕ್ತ ಪಡಿಸಿದರು. ‘ಈಗ ನನ್ನ ಆರೋಗ್ಯ ಮೊದಲ ಹಾಗಿಲ್ಲ, ರಾಜಕೀಯವೂ ಮೊದಲ ಹಾಗಿಲ್ಲ. ನಾನು  ಈ ಬಾರಿ ಸ್ಪರ್ಧಿಸುತ್ತೇನೊ ಇಲ್ಲವೊ ಎನ್ನುವ ನಿರ್ಧಾರ ಎಪ್ರಿಲ್‌ 2 ರಂದು ತಿಳಿಸುತ್ತೇನೆ’ ಎಂದರು.

‘ನನಗೆ ಕೆಲವರು ಕತ್ತೆ,ನಾಯಿ ಎಂದು ಬೈತರು, ಆದರೂ ನಾನು ಬೇಸರ ಮಾಡಿಕೊಳ್ಳಲಿಲ್ಲ. ನಾನು ನಿಷ್ಠೆ ಮತ್ತು ಶೃದ್ಧೆಯಿಂದ ಕೆಲಸ ಮಾಡಿದವನು’ ಎಂದರು. 

‘ರಾಜಕೀಯದಲ್ಲಿ ನನಗೆ ಸಾಕಷ್ಟು ಗೌರವ ಸಿಕ್ಕಿದೆ. ನಾನು ಮಾಡಿರುವ ಕೆಲಸದ ಮೇಲೆ ಮತ ಕೇಳುವ ಹಕ್ಕು ನನಗಿದೆ’ ಎಂದರು.

‘ಸಿಂಗಪುರಕ್ಕೆ ಹೋಗಿ ಬಂದ ಮೇಲೆ ನನಗೆ ಪುನರ್‌ಜನ್ಮ ಸಿಕ್ಕಿದೆ. ಸಿನಿಮಾ ಕ್ಷೇತ್ರದಲ್ಲಿ ಸೋಲು , ಗೆಲುವು ಎರಡನ್ನೂ ಕಂಡಿದ್ದೇನೆ. ಸೋಲು ಮತ್ತು ಗೆಲುವನ್ನು ಸಮ ಚಿತ್ತದಿಂದ ಕಾಣುತ್ತೇನೆ’ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next