Advertisement

ಅಮಾಸೆಬೈಲು ಸಶಸ್ತ್ರ ಮೀಸಲು ಪಡೆ ಎಆರ್ ಎಸ್ ಐ ಆತ್ಮಹತ್ಯೆ

11:53 AM May 29, 2020 | keerthan |

ಸಿದ್ದಾಪುರ: ಇಲ್ಲಿನ ಸಶಸ್ತ್ರ ಮೀಸಲು ಪಡೆಯ ಎಆರ್ ಎಸ್ ಐ ಪೊಲೀಸ್ ಠಾಣೆಯ ಅನತಿ ದೂರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

Advertisement

56 ವರ್ಷದ ಪ್ರಾಯದ ಮಲ್ಲಿಕಾರ್ಜುನ ಗುಬ್ಬಿ ಆತ್ಮಹತ್ಯೆ ಮಾಡಿಕೊಂಡವರು. ಕೊಪ್ಪಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಕಳೆದ ಎರಡು ವಾರಗಳ ಹಿಂದಷ್ಟೇ ಅಮಾಸೆಬೈಲು ಪೊಲೀಸ್ ಠಾಣೆಗೆ ವರ್ಗವಾಗಿದ್ದರು.

ಇಂಡಿಯನ್ ರಿಜರ್ವ್ ಬಾಟಲಿಯನ್ ಮುನಿರಾಬಾದ್ ಕೊಪ್ಪಳದಲ್ಲಿ ಕಾರ್ಯ ಮಿರ್ವಹಿಒಸುತ್ತಿದ್ದ ಇವರು ಕಳೆದ ಆರು ತಿಂಗಳ ಹಿಂದೆ ಎಎರ್ ಎಸ್ ಐ ಆಗಿ ಪದೋನ್ನತಿ ಪಡೆದಿದ್ದರು. ಮೇ 16ರಂದು ಉಡುಪಿ ಜಿಲ್ಲೆಯ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಆರಂಭಿಸಿದ್ದರು.

ಇಂದು ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಠಾಣೆಯ ಬಳಿಯಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸ ಒತ್ತಡವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next