Advertisement

ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಆರೋಪ! ಎಸಿಬಿಯಿಂದ ಅಮರಮುಡ್ನೂರು ಗ್ರಾ.ಪಂ. ಕಡತ ವಶ

09:16 PM Jul 28, 2020 | sudhir |

ಸುಳ್ಯ : ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಆಗಿದೆ ಎಂದು ಗ್ರಾಮಸ್ಥರೊಬ್ಬರು ಎಸಿಬಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಅಮರಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ ದಾಖಲೆ ಸಂಗ್ರಹಿಸಿದ್ದಾರೆ.

Advertisement

ಗ್ರಾಮಸ್ಥ ಭಾಸ್ಕರ ಆಚಾರ್ಯ ಅವರು ತನ್ನ ದೂರಿನಲ್ಲಿ ಮೂವರು ಫಲಾನುಭವಿಗಳ ಹೆಸರನ್ನು ಉಲ್ಲೇಖಿಸಿ ದೂರು ನೀಡಿದ್ದಾರೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಪಂಚಾಯತ್ ಗೆ ಆಗಮಿಸಿ ಮನೆ ನಿವೇಶನ ವಿತರಣೆಯ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next