Advertisement

ಪೆಂಡಾಲ್ ಗೋಡಾನಿಗೆ ಬೆಂಕಿ-ಹಾನಿ

12:38 PM Apr 20, 2019 | pallavi |

ಇಳಕಲ್ಲ: ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್ನಿಂದ ಪೆಂಡಾಲ್ ಗೋಡಾನಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಅಲಂಕಾರಿಕ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ನಗರದ ದರ್ಗಾ ಎದುರಿಗೆ ನಡೆದಿದೆ.

Advertisement

ಇಳಕಲ್ಲದ ನಾರಾಯಣ ಶಂಕರಪ್ಪ ಮೇಣೆದಾಳ ಮಾಲೀಕತ್ವದ ಬನಶಂಕರಿ ಡೆಕೋರೇಟರ್ನಲ್ಲಿ ಈ ಬೆಂಕಿಯ ಅವಘಡ ಸಂಭವಿಸಿದೆ. ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಬಳಸುವ ಪೆಂಡಾಲ್, ಚೇರ್‌, ಸೋಫಾ, ಮ್ಯಾಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಈ ಗೋಡಾನಿನಲ್ಲಿ ಶೇಖರಿಸಿ ಇಡಲಾಗಿತ್ತು. ಆದರೆ ಯಾವಾಗ ಈ ವಿದ್ಯುತ್‌ ಅವಘಡ ಸಂಭವಿಸಿತೋ ಗೊತ್ತಿಲ್ಲ. ಬೆಳಿಗ್ಗೆ 11:30ರ ಸುಮಾರಿಗೆ ಗೋಡಾನಿನ ವೆಂಟಿಲೇಟರ್‌ನಿಂದ ಅಪಾರ ಪ್ರಮಾಣದ ಹೊಗೆ ಬರುತ್ತಿರುವದನ್ನು ಗಮನಿಸಿದ ಸಾರ್ವಜನಿಕರು, ಮಾಲೀಕರಿಗೆ ಹಾಗೂ ಪೊಲೀಸ್‌ ಠಾಣೆಗೆ ವಿಷಯ ತಿಳಿಸಿದ್ದಾರೆ.

ನಗರ ಠಾಣೆಯ ಪಿಎಸ್‌ಐ ಅನಿಲ ರಾಠೊಡ ಮತ್ತು ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿ ಗೋಡಾನಿನ ತುಂಬ ಆವರಿಸಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿಗಳು 2 ಗಂಟೆಗಳ ಕಾಲ ಕಾರ್ಯಾಚನಾರಾಯಣ ಶಂಕರಪ್ಪರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸುಮಾರು 30ರಿಂದ 40 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next