Advertisement

ಗ್ರಾ.ಪಂ.ಗಳ ಇಚ್ಛಾನುಸಾರ ತೆರಿಗೆ ವಸೂಲಿಗೆ ಅಂಕುಶ

07:26 AM Jul 31, 2019 | sudhir |

ಮಂಗಳೂರು: ಕೆಲವು ಗ್ರಾಮ ಪಂಚಾಯತ್‌ಗಳು ತಮ್ಮ ವ್ಯಾಪ್ತಿಯಲ್ಲಿರುವ ಸಣ್ಣ, ಅತಿ ಸಣ್ಣ, ಮಧ್ಯಮ ಮತ್ತು ಬೃಹತ್‌ ಕೈಗಾರಿಕೆ ಗಳಿಂದ ನಿಗದಿತ ಮಾನದಂಡಕ್ಕಿಂತ ಹೆಚ್ಚು ಕಟ್ಟಡ ತೆರಿಗೆ ವಸೂಲು ಮಾಡು ತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಕನಿಷ್ಠ ದರ ಶೇ.0.4ರಿಂದ ಗರಿಷ್ಠ ಶೇ.0.6ರ ವರೆಗೆ ಮಾತ್ರ ತೆರಿಗೆ ವಿಧಿಸಲು ಸ್ಪಷ್ಟ ಸೂಚನೆ ನೀಡಿದೆ.
ಕೆಲವು ಗ್ರಾ.ಪಂ.ಗಳು ತಮಗೆ ಲಾಭವಾಗಬೇಕು ಎಂಬು ದಕ್ಕಾಗಿ ಕೈಗಾರಿಕಾ ಕಟ್ಟಡಗಳಿಗೆ ನಿಗದಿತ ಮಾನ ದಂಡವನ್ನು ಬಿಟ್ಟು ಇಚ್ಛಾ ನುಸಾರ ತೆರಿಗೆ ವಸೂಲು ಮಾಡುತ್ತಿವೆ ಎಂಬ ದೂರಿತ್ತು. ಈ ಹಿನ್ನೆಲೆಯಲ್ಲಿ ಕೈಗಾರಿಕೆ ಸ್ನೇಹಿ ನೀತಿಯನ್ವಯ ಮತ್ತು ತೆರಿಗೆಯಲ್ಲಿ ಏಕರೂಪತೆ ತರುವುದಕ್ಕಾಗಿ ಸರಕಾರ ಈ ಸೂಚನೆ ನೀಡಿದೆ.

Advertisement

ಸರಕಾರದ ಸೂಚನೆಯ ಪ್ರಕಾರ ಅತಿ ಸಣ್ಣ ಕೈಗಾರಿಕೆ ಅಥವಾ ಇತರ ಅತಿಸಣ್ಣ ಘಟಕಗಳಿಗೆ ಮತ್ತು ಸಣ್ಣ ಕೈಗಾರಿಕೆ ಅಥವಾ ಇತರ ಸಣ್ಣ ಘಟಕಗಳಿಗೆ ಶೇ.0.4 ತೆರಿಗೆ ವಿಧಿಸಲು ಮಾತ್ರ ಅವಕಾಶವಿದೆ. ಮಧ್ಯಮ ಕೈಗಾರಿಕೆ ಅಥವಾ ಮಧ್ಯಮ ಘಟಕಗಳಿಗೆ ಶೇ.0.5 ಮತ್ತು ಭಾರೀ ಕೈಗಾರಿಕೆ ಅಥವಾ ಭಾರೀ ಘಟಕಗಳಿಗೆ ಶೇ 0.6ರಷ್ಟು ಮಾತ್ರ ಅವಕಾಶವಿದೆ.

ರಸ್ತೆಗಿಲ್ಲ ತೆರಿಗೆ!
ಖಾಲಿ ಇರುವ ಜಾಗದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಬಳಸುವ ಭಾಗಕ್ಕೆ ಶೇ.0.05 ತೆರಿಗೆ ವಿಧಿಸಲು ಸರಕಾರ ಅವಕಾಶ ನೀಡಿದೆ. ಬಳಸದೆ ಇರುವ ಖಾಲಿ ಜಾಗಕ್ಕೆ ಶೇ.0.02 ವಿಧಿಸಲು ಸೂಚಿಸಲಾಗಿದೆ. ರಸ್ತೆ, ಆಲಂಕಾರಿಕ ಉದ್ಯಾನವನ, ಪರಿಸರ ಸಂರಕ್ಷಣೆ ಮತ್ತು ಹಸುರೀಕರಣಕ್ಕಾಗಿ ಉಳಿಸಿರುವ ಜಾಗಕ್ಕೆ ತೆರಿಗೆ ವಿಧಿಸ ಬಾರದು ಎಂದು ಸ್ಪಷ್ಟಪಡಿಸಿದೆ.

ಗ್ರಾಮ ಪಂಚಾಯತ್‌ಗಳು ಕೈಗಾರಿಕೆಗಳ ಕಟ್ಟಡ ಗಳಿಗೆ ರಾಜ್ಯ ಗ್ರಾಮ ಸ್ವರಾಜ್‌ ಮತ್ತು ಪಂ.ರಾಜ್‌ ಅಧಿನಿಯಮ 1993ರ ಪ್ರಕರಣ 199 ಮತ್ತು ಅನುಸೂಚಿ-4ರಲ್ಲಿ ನಿರ್ದಿಷ್ಟಪಡಿಸಿರುವ ಕನಿಷ್ಠ ದರವಾದ ಶೇ.0.4ರಿಂದ ಗರಿಷ್ಠ ಶೇ.0.6ರವರೆಗೆ ಮಾತ್ರ ವಿಧಿಸಿ ಕರ ನಿರ್ಧರಣೆ ಮಾಡಲು ಈ ಹಿಂದೆಯೇ ತಿಳಿಸಿತ್ತು. ಆದರೆ ಅದನ್ನು ಕೆಲವು ಗ್ರಾ.ಪಂಗಳು ಪಾಲಿಸುತ್ತಿಲ್ಲ ಎಂದು ಕೈಗಾರಿಕಾ ವಲಯದಿಂದ ಆಕ್ಷೇಪ ವ್ಯಕ್ತವಾಗಿತ್ತು.

ಆಸ್ತಿ ತೆರಿಗೆ ಹೊಣೆ ಕೆಐಎಡಿಬಿ ಹೆಗಲಿಗೆ
ಕೈಗಾರಿಕಾ ಪ್ರದೇಶಗಳ ಆಸ್ತಿ ತೆರಿಗೆ ಸಂಗ್ರಹಿಸುವ ಹೊಣೆಗಾರಿಕೆಯನ್ನು ಸರಕಾರ ಗ್ರಾ.ಪಂ.ಗಳ ಬದಲಿಗೆ ಕೆಐಎಡಿಬಿಗೆ ಇತ್ತೀಚೆಗೆ ವಹಿಸಿದೆ. ಹೀಗಾಗಿ ಕೈಗಾರಿಕಾ ಪ್ರದೇಶಗಳ ಆಸ್ತಿ ತೆರಿಗೆಯನ್ನು ಪಿಡಿಒಗಳು ನೇರವಾಗಿ ವಸೂಲು ಮಾಡಬಾರದು ಎಂದು ಸರಕಾರ ಸೂಚಿಸಿದೆ. ಬದಲಾಗಿ ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕೈಗಾರಿಕಾ ಪ್ರದೇಶಗಳ ಸ್ವತ್ತುಗಳ ಆಸ್ತಿ ತೆರಿಗೆಯನ್ನು ಲೆಕ್ಕಾಚಾರ ಮಾಡಿ ಘಟಕಗಳ ಪಟ್ಟಿಯೊಂದಿಗೆ ಕೆಐಎಡಿಬಿಗೆ ಸಲ್ಲಿಸಬೇಕು. ಕೆಐಎಡಿಬಿಯು ಆನ್‌ಲೈನ್‌ ಮೂಲಕ ತೆರಿಗೆ ಸಂಗ್ರಹಿಸಿ ಆಯಾ ಗ್ರಾ.ಪಂ.ಗಳಿಗೆ ಪಾವತಿಸಲಿದೆ.

Advertisement

ಕೈಗಾರಿಕೆಗಳಿಗೆ ಏಕರೂಪದ ತೆರಿಗೆ
ಕೆಲವು ಗ್ರಾ.ಪಂ.ಗಳು ಕೈಗಾರಿಕಾ ಕಟ್ಟಡಗಳಿಗೆ ನಿಗದಿತ ದರವಲ್ಲದೆ ತಮ್ಮ ಇಚ್ಛಾನುಸಾರ ತೆರಿಗೆ ನಿಗದಿಪಡಿಸಿದ್ದರಿಂದ ಕೈಗಾರಿಕೆಗಳಿಗೆ ತೊಂದರೆ ಆಗುತ್ತಿದೆ. ಹೀಗಾಗಿ ತೆರಿಗೆಯಲ್ಲಿ ಏಕರೂಪತೆ ತರುವುದಕ್ಕಾಗಿ ಸರಕಾರ ಗ್ರಾ.ಪಂ.ಗಳಿಗೆ ಸೂಚನೆ ನೀಡಿದೆ.
– ಗೋಕುಲ್‌ದಾಸ್‌ ನಾಯಕ್‌,
ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ದ.

  • ದಿನೇಶ್‌ ಇರಾ 
Advertisement

Udayavani is now on Telegram. Click here to join our channel and stay updated with the latest news.

Next