Advertisement

ಸ್ಮಶಾನಕ್ಕೆ ಸ್ಥಳ ಮಂಜೂರು ಮಾಡಿ

03:18 PM Feb 26, 2022 | Team Udayavani |

ರಾಯಚೂರು: ನಗರದ ಎಲ್‌ಬಿಎಸ್‌ ನಗರದಲ್ಲಿರುವ ರುದ್ರಭೂಮಿ ಸ್ಥಳ ಬಹಳ ಚಿಕ್ಕದಾಗಿದ್ದು, ಸಂಸ್ಕಾರ ಮಾಡಲು ಸಮಸ್ಯೆ ಎದುರಾಗಿದೆ. ಕೂಡಲೇ ಸ್ಮಶಾನಕ್ಕೆ ಸ್ಥಳ ಮಂಜೂರು ಮಾಡುವಂತೆ ಆಗ್ರಹಿಸಿ ಎಲ್‌ಬಿಎಸ್‌ ನಗರ ನಿವಾಸಿಗಳು ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ರುದ್ರಭೂಮಿಗೆ ನಿಗದಿಪಡಿಸಿದ ಸ್ಥಳ ಮಾತ್ರ ಅಷ್ಟೇ ಇದೆ. ಇಲ್ಲಿ ಮೂರು ಎಕರೆ ಪ್ರದೇಶ ಮುನ್ನೂರುಕಾಪು ಸಮಾಜದವರ ಅಧೀನದಲ್ಲಿದೆ. ಉಳಿದ ಸ್ವಲ್ಪ ಸ್ಥಳದಲ್ಲಿ ಎಲ್‌ಬಿಎಸ್‌, ಮೈಲಾರ ನಗರ, ಜಲಾಲ್‌ ನಗರ, ಕಾಳಿದಾಸ ನಗರ, ಮಡ್ಡಿಪೇಟೆ, ಮಕ್ತಲ್‌ ಪೇಟೆ, ಸಿಯಾತಲಾಬ್‌ ಪ್ರದೇಶದಲ್ಲಿ ಜನ ಸಂಸ್ಕಾರ ಮಾಡುತ್ತಾರೆ. ಈ ಪ್ರದೇಶದ ಒಂದು ಎಕರೆಯಲ್ಲಿ ಕಸ ಹಾಕಲಾಗುತ್ತದೆ. ಶೌಚಗೃಹಕ್ಕೆ ಇದೇ ಸ್ಥಳವನ್ನು ಜನರು ಅವಲಂಬಿಸಿದ್ದಾರೆ ಎಂದು ವಿವರಿಸಿದರು.

ಇಕ್ಕಟ್ಟಾದ ಸ್ಥಳದಲ್ಲಿ ಹಿಂದೆ ಶವಸಂಸ್ಕಾರ ಮಾಡಿದ ಸ್ಥಳದಲ್ಲೇ ಮತ್ತೆ ಶವ ಹೂಳುವ ಸ್ಥಿತಿ ಇದೆ. ಹೀಗಾಗಿ ನಗರ ಸಮೀಪದಲ್ಲಿ ಸೂಕ್ತ ಸ್ಥಳ ಗುರುತಿಸಿ ಎಲ್‌ಬಿಎಸ್‌ ನಗರ ಸೇರಿ ಸುತ್ತಲಿನ ಜನರಿಗೆ ಶವ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ನಿವಾಸಿಗಳಾದ ಶೇಖರ ನರಸಪ್ಪ ನೀಲಗಂಟಿ, ನರಸಿಂಹಲು, ತಿಮ್ಮಣ್ಣ ಯಾದವ್‌, ನಾಗರಾಜ, ನಬಿಸಾಬ್‌, ಆರ್‌, ವೀರೇಶ, ಶರಣಪ್ಪ, ರವಿಕುಮಾರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next