Advertisement

ಬೆಳಗಾವಿ ಬೆಂಕಿ ಬೆಂಗ್ಳೂರಿಂದ ಯುರೋಪ್‌ಗೆ ಹೊತ್ತಿಕೊಳ್ಳಲಿದೆ:ಶೆಟ್ಟರ್

02:48 PM Sep 05, 2018 | Team Udayavani |

ಹುಬ್ಬಳ್ಳಿ : ಬೆಳಗಾವಿಯ ಲಕ್ಷ್ಮಿ- ಜಾರಕಿಹೊಳಿ ಅಸಮಾಧಾನದ ಬೆಂಕಿ ಬೆಂಗಳೂರಿಗೆ ಬಂದಿದ್ದು ,ಅದು ಯುರೋಪ್‌ಗೂ  ಹೊತ್ತಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಒಗಟಾಗಿ ಕಾಂಗ್ರೆಸ್‌ ಮತ್ತು ಮೈತ್ರಿ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಳಗ್ಗಿನಿಂದ ಸಂಜೆಯ ವರೆಗೆ ಲಕ್ಷ್ಮಿ-ಜಾರಕಿಹೊಳಿ ಸಮರವನ್ನು ಕೇಳುತ್ತಿದ್ದೇವೆ. ಶೀಘ್ರದಲ್ಲಿ  ಮೈತ್ರಿ ಸರ್ಕಾರ ಪತನಗೊಳ್ಳಲಿದ್ದು ,ಬಿಜೆಪಿ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯ ಎಂದರು. 

ಕೆಶಿಪ್‌ ಕಚೇರಿಯನ್ನು ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರಿಸಿದ್ದಕ್ಕೆ ಶೆಟ್ಟರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಉತ್ತರ ಕರ್ನಾಟಕವನ್ನ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಕಿಡಿ ಕಾರಿದರು. 

ಸಿದ್ದರಾಮಯ್ಯ ಯುರೋಪ್‌ ಪ್ರವಾಸಕ್ಕೆ ತೆರಳಿರುವ ಕಾರಣ ಶೆಟ್ಟರ್‌ ಅವರು ಅಸಮಾಧಾನದ ಬೆಂಕಿ ಯುರೋಪ್‌ಗೂ ಹೊತ್ತಿಕೊಳ್ಳಲಿದೆ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next