Advertisement

ಮೈತ್ರಿ ಸರ್ಕಾರದ ಆಯಸ್ಸು ಮುಗೀತಿದೆ

01:50 AM Feb 04, 2019 | Team Udayavani |

ಹರಿಹರ: ಶಾಸಕರಲ್ಲಿ ಒಮ್ಮತವಿಲ್ಲದ ಮೈತ್ರಿ ಸರ್ಕಾರದ ಆಯಸ್ಸು ಮುಗಿಯುತ್ತಿದ್ದು, ಯಾವುದೇ ಕ್ಷಣದಲ್ಲಿ ಪತನವಾಗುವ ಸಾಧ್ಯತೆಯಿದೆ ಎಂದು ಶಾಸಕ ಬಿ.ಶ್ರೀರಾಮುಲು ಹೇಳಿದರು.

Advertisement

ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಿದ್ದ ಅವರು, ಸ್ವತಃ ಕಾಂಗ್ರೆಸ್‌ ಶಾಸಕರೇ ಮೈತ್ರಿ ಸರ್ಕಾರದಲ್ಲಿ ತಮ್ಮ ಕ್ಷೇತ್ರ ಕಡೆಗಣಿಸಲಾಗುತ್ತಿದೆ ಎಂದು ಕಿಡಿ ಕಾರುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲವೆಂದು ಬಹುತೇಕ ಶಾಸಕರು ಅಸಮಾಧಾನಗೊಂಡಿದ್ದಾರೆ. ಇದನ್ನು ಬಹಳ ದಿನ ಅದುಮಿಡಲಾಗದು. ಮೈತ್ರಿ ಪಕ್ಷಗಳ ಒಳಜಗಳದಿಂದಲೇ ಸರ್ಕಾರ ಪತನವಾಗಲಿದೆ. ಮೈತ್ರಿ ಪಕ್ಷಗಳ ಕಿತ್ತಾಟದಿಂದಲೇ ಸರ್ಕಾರ ಪತನವಾಗಲಿದ್ದು, ಕೈಕಟ್ಟಿ ಕುಳಿತುಕೊಳ್ಳಲು ನಾವೇನೂ ಸನ್ಯಾಸಿಗಳಲ್ಲ. ಏಕೈಕ ದೊಡ್ಡ ಪಕ್ಷವಾದ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಲೇಬೇಕಾಗುತ್ತದೆ. ಆಗ ಎರಡೂ ಪಕ್ಷಗಳಿಂದ ಬಹು ಸಂಖ್ಯೆಯ ಶಾಸಕರು ಹೊರ ಬಂದು ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next