Advertisement

Kaikamba ಜಾನುವಾರು ಕಳವಿಗೆ ಯತ್ನ ಆರೋಪ: ಬಂಧನ

12:21 AM Dec 28, 2023 | Team Udayavani |

ಕೈಕಂಬ: ಕಾರುಗಳಲ್ಲಿ ತೆರಳಿ ಮಂಗಳೂರಿನ ವಿವಿಧ ಕಡೆಗ ಳಿಂದ ದನಗಳನ್ನು ಕಳವು ಮಾಡುತ್ತಿದ್ದ ಆರೋಪದಲ್ಲಿ ಮೂಡುಬಿದಿರೆ ಪಡುಕೊಣಾಜೆ ಗ್ರಾಮದ ನೀರಳಿಕೆ ಹೌಸ್‌ನ ಇಮ್ರಾನ್‌ ಇಬ್ರಾಹಿಂ (24) ಮತ್ತು ಕಲ್ಲಬೆಟ್ಟು ಗ್ರಾಮದ ಗಂಟಲಕಟ್ಟೆ ಮಸೀದಿಯ ಬಳಿಯ ನಾಸಿರ್‌ ಯಾನೆ ನಾಚಿ (26) ಅವರನ್ನು ಡಿ.27 ರಂದು ಬೆಳಗಿನ ಜಾವ ಸುಮಾರು 3.30ಕ್ಕೆ ಬಜಪೆ ಎಸ್‌ಐ ಕುಮಾರೇಶನ್‌ ನೇತೃತ್ವದ ತಂಡ ತೆಂಕ ಎಡಪದವು ಗ್ರಾಮದ ದಡ್ಡಿ ಚೆಕ್‌ಪೋಸ್ಟ್‌ನಲ್ಲಿ ಬಂಧಿಸಿದೆ.

Advertisement

ಬಂಧಿತರಿಂದ ದನ ಕಳವು ಮಾಡಲು ಬಳಸಿರುವ ಸುಮಾರು 10 ಲಕ್ಷ ರೂ.ಮೌಲ್ಯದ ನೀಲಿ ಬಣ್ಣದ ಸ್ವಿಫ್ಟ್‌ ಕಾರು, ಬಳಿ ಬಣ್ಣದ ರಿಟ್ಜ್ ಕಾರು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.ಬಜಪೆ ಠಾಣೆ ನಿರೀಕ್ಷಕರಾದ ಸಂದೀಪ್‌ ಅವರ ಆದೇಶದಂತೆ ಎಸ್‌ಐ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆರೋಪಿ ಗಳು ಬಲೆಗೆ ಬಿದ್ದಿದ್ದಾರೆ.

ತಂಡ ರಚನೆ
ಬಡಗ ಎಡಪದವು ಗ್ರಾಮದ ಕಿನ್ನಿಮಜಲು ನಿವಾಸಿ ಚಂದನ್‌ ಉಪಾಧ್ಯಾಯ ಅವರು ಡಿ. 14 ರಂದು ಬೆಳಗ್ಗೆ ಮೇಯಲು ಬಿಟ್ಟ ದನಗಳ ಪೈಕಿ 2 ಹಸುಗಳು ಮತ್ತು 1 ಕರುವನ್ನು ಯಾರೋ ಕದ್ದು ಕಡಿದು ಮಾಂಸ ಮಾಡಿರುವ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣದ ಆರೋಪಿಗಳೆಂದು ಶಂಕಿಸಲಾದ ತೋಡಾರು, ಹಂಡೇಲು, ಉಳಾಯಿ ಬೆಟ್ಟು ಮತ್ತು ಗಂಟಲಕಟ್ಟೆ ಕಡೆಯ ಕೆಲವರ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next