Advertisement

Subramanya ತಂಡದಿಂದ ಹಲ್ಲೆ ಆರೋಪ; ದೂರು

11:47 PM May 27, 2024 | Team Udayavani |

ಸುಬ್ರಹ್ಮಣ್ಯ: ಕೃಷಿ ಜಮೀನಿನಲ್ಲಿ ಕೆಲಸ ನಿರ್ವಹಿಸುತಿದ್ದಾಗ ತಂಡವೊಂದು ಬಂದು ಹಲ್ಲೆ ನಡೆಸಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಆಲೆಟ್ಟಿ ಗ್ರಾಮದ ಕಾನಮನೆ ದೇವಕಿ ಅವರು ಸುಳ್ಯ ತಾ|ನ ನಾಲ್ಕೂರು ಗ್ರಾಮದ ಮೆಟ್ಟಿನಡ್ಕದಲ್ಲಿ ಕೃಷಿ ಜಮೀನು ಹೊಂದಿದ್ದು, ಮೇ 22ರಂದು ದೇವಕಿ ಹಾಗೂಅವರ ಗಂಡ ಸುಂದರ ನಾಯ್ಕ ಅವರು ಜಮೀನಿನ ಕೃಷಿ ಕೆಲಸಕ್ಕೆ 3-4 ಜನ ಕೆಲಸದಾಳುಗಳನ್ನು ಕರೆದೊಯ್ದು ಕೆಲಸ ಪ್ರಾರಂಭಿಸುವಾಗ ಆರೋಪಿಗಳಾದ ತೀರ್ಥರಾಜ, ಶಿವಪ್ಪ ನಾಯ್ಕ, ಯತೀನ್‌, ಪಲ್ಲವಿ, ಶ್ರುತಿ ಅವರು ಕೈಯಲ್ಲಿ ಕತ್ತಿ, ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಬೆದರಿಕೆ ಹಾಕುತ್ತಾ, ಅವಾಚ್ಯವಾಗಿ ಬೈಯುತ್ತಾ ಕೆಲಸಕ್ಕೆ ಅಡ್ಡಿಯುಂಟುಮಾಡಿ, ದೇವಕಿ ಹಾಗೂ ಸುಂದರ ಅವರಿಗೆ ಹಲ್ಲೆ ನಡೆಸಿದ್ದಾರೆ.

ಗಾಯಾಳುಗಳು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next